ಶುಕ್ರವಾರ, ಏಪ್ರಿಲ್ 21, 2023

ಯಕ್ಷಪ್ರಶ್ನೆ.! (ಕವಿತೆ) - ಬಸವರಾಜ ಕರುವಿನ, ಬಸವನಾಳು.

ನಾಡನಾಳುವ ದೊರೆಗಳಿಗಿಲ್ಲ ತತ್ವ, ಸಿದ್ಧಾಂತಗಳ ಹಂಗು.!
ಅಧಿಕಾರಬೇಕೆಂಬುದಷ್ಟೇ ಅವರ ಗುಂಗು
ಚುಕ್ಕಾಣಿಗಾಗಿ ಹಲವಾರು ಚಮತ್ಕಾರ
ಟಿಕೆಟ್ ಸಿಗದವರೆಲ್ಲ ಪಕ್ಷಾಂತರ.!

ನೈತಿಕತೆ ಕಳೆದುಕೊಂಡ ರಾಜಕೀಯ.!
ಹಣ, ಹೆಂಡದ ನಡುವೀಗ ಮತದಾರ ಪರಕೀಯ
ಕುಟುಂಬ ರಾಜಕಾರಣದಲ್ಲಿ ಯುವರಾಜನಿಗೆ ಟಿಕೆಟ್.!
ತತ್ವ,ಸಿದ್ದಾಂತಕ್ಕಾಗಿ ಬದುಕಿದವರಿಗೆ ಖಾಲಿ ಬಕೆಟ್.!

ಚುನಾವಣೆ ಹಬ್ಬದಲ್ಲಿ ಮತದಾರನೆ ಭೇಟೆ
ಕಟ್ಟಿ ಬಿಸಾಡುವರು ಅಭಿವೃದ್ಧಿಯ ಮೂಟೆ
ಜಾತಿ ಮತದ ಹೆಸರಲ್ಲಿ ಗೆಲುವಿನ ಲೆಕ್ಕಾಚಾರ
ದೇಶದ ಸಮಸೆಗಳಿಗಿಲ್ಲ ಶಾಶ್ವತ ಪರಿಹಾರ  

ಬದಲಾಗುವುದು ಯಾವಾಗ ಈ ವ್ಯವಸ್ಥೆ.?
ಕುರಿಮಂದೆಯಂತೆ ಮತದಾರನ ಅವ್ಯವಸ್ಥೆ.!
ಅಂತಃ ಕರಣದ ಅರಸ ಸಿಗಬಹುದೇ ನಾಡಿಗೆ.?
ದೇಶ ಸಾಗಬಹುದೇ ಎಲ್ಲರನ್ನ ಒಳಗೊಂಡಂತೆ ಅಭಿವೃದ್ಧಿ ಯ ಜಾಡಿಗೆ.?

- ಬಸವರಾಜ ಕರುವಿನ, ಬಸವನಾಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...