ಶುಕ್ರವಾರ, ಏಪ್ರಿಲ್ 21, 2023

ತಂಬೆಲರೇ (ಕವಿತೆ) - ಸಬ್ಬನಹಳ್ಳಿ ಶಶಿಧರ.

ತಂಗಾಳಿಯೆ ನೀ ಬೇಗ ಬಾ
ನನ್ನವಳ ಮನ ಸೇರಲು
ತಂಬೆಲರೇ ತಂಪಾಗಿ ಬಾ
ಮನದ ಬೇಗೆ ನೀಗಲು

ದೇಹ ಎದುರಿದೆ ಮನವು ದೂರಿದೆ
ಎದುರೆ ಇದ್ದರು ಮಾತು ಮರೆತಿದೆ
ಏನಾಗಿದೆ ಮನವು ಹೇಳದಿದೆ
ನನಗೇತಕೊ ದಿಗಿಲಾಗಿದೆ

ದಿನವು ಹೀಗೆಯೆ ಬದುಕು ಸಾಗಿದೆ
ಚೇತನವಿಲ್ಲದೆ ಮನಸು ಬಾಡಿದೆ
ಪ್ರೀತಿಯ ನುಡಿ ಕೇಳದೆ ಮನವು
ವಿಲವಿಲ ಒದ್ದಾಡಿದೆ

ಪ್ರೀತಿ ಪ್ರೇಮವು ಎಲ್ಲೋ ಮಲಗಿವೆ
ನೋವು ಬೇಸರ ಎದೆಯ ಬಿರಿದಿವೆ
ಕಾಮನಬಿಲ್ಲಾಗಿವೆ ಮನದಾಸೆಗಳು
ನಿಲ್ಲದೆ ಹಾರೋಡುತಿವೆ

ಓಡೋಡಿ ಬಾ ತಂಗಾಳಿಯೆ
ಸಡಗರ ಹೊತ್ತು ಬಳಿಗೆ ಬಾ
ನನ್ನವಳ ನಕ್ಕು ನಗಿಸು ಬಾ
ಪ್ರೀತಿಯ ಸೊಗಸ ಮೆರೆಸು ಬಾ.
 
 
- ಸಬ್ಬನಹಳ್ಳಿ ಶಶಿಧರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...