ಶುಕ್ರವಾರ, ಏಪ್ರಿಲ್ 21, 2023

ಕಾವ್ಯ ಕನ್ಯೆಯರು (ಕವಿತೆ) - ಗೊರೂರು ಅನಂತರಾಜು, ಹಾಸನ.

             (ಚಿತ್ರ: ಅಗ್ನಿ ಸುರೇಶ್).

ನೂರಾಸೆಯ ಕಣ್ಣುಗಳಲ್ಲಿ 
ನೂರೆಂಟು ಕನಸುಗಳನ್ನು 
ಹೆಣೆದುಕೊಳ್ಳುವವರು
ನನ್ನ ಕಾವ್ಯ ಕನ್ಯೆಯರು

ಬೀದಿ ಕಾಮುಕರ
ಪೋಲಿ ಪದ ಪುಂಜಗಳಿಗೆ 
ನೊಂದು ನಲುಗುವವರು
ನನ್ನ ಕಾವ್ಯ ಕನ್ಯೆಯರು

ಹದಿ ಹರೆಯದ 
ಬಯಕೆಗಳಿಗೆ ಬಲಿಯಾಗಿ 
ಸುಟ್ಟು ಕರಕಲಾಗುವವರು
ನನ್ನ ಕಾವ್ಯ ಕನ್ಯೆಯರು 

ಜಾತಿ ಧಮ೯ ಪರಂಪರೆಯ 
ಸಂಕೋಲೆಗೆ ಸಿಲುಕಿ 
ಧಮ೯ ಸಂಕಟದಿ ಕೊರಗುವವರು
ನನ್ನ ಕಾವ್ಯ ಕನ್ಯೆಯರು

ವರನೆಂಬ ವರದಕ್ಷಿಣೆಯ 
ಆಲದಮರಕ್ಕೆ ಮಾಲೆ ಹಾಕಲು 
ಕಾದು ಕುಳಿತ್ತಿರುವವರು
ನನ್ನ ಕಾವ್ಯ ಕನ್ಯೆಯರು

  
- ಗೊರೂರು ಅನಂತರಾಜು, ಹಾಸನ.
9449462879
ಚಿತ್ರ: ಅಗ್ನಿ ಸುರೇಶ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...