ಮಂಗಳವಾರ, ಏಪ್ರಿಲ್ 11, 2023

ಶ್ರೀಗಿರಿಯ ಸಿಂಹಿಣಿ (ಕವಿತೆ) - ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ.

ಹೆಣ್ಣುಮಕ್ಕಳ ಕಣ್ಮಣಿ
ಶ್ರೀ ಗಿರಿಯ ಸಿಂಹಿಣಿ
ಚೆನ್ನಮಲ್ಲಿಕಾರ್ಜುನನ
ಪ್ರಿಯ ಮಹಾದೇವಿ
ನಿನಗೆ ನಮೋ ನಮೊ 

ಆತ್ಮಜ್ಞಾನವ ಬೋಧಿಸಿದೆ
ವಚನ ಸಾಹಿತ್ಯ ರಚಿಸಿದೆ ಅನುಭವ ಮಂಟಪದಿ
ಅಂಜದೆ ಅಳುಕದೆ ನಿಂದೆ
ದಿಟ್ಟೆದೆಯ ಜಾಣ ಹೆಣ್ಣೆ

ವೀರ ವಿರಾಗಿಣಿ ನೀನಾದೆ
ಶರಣ ಸತಿ ಲಿಂಗ ಪತಿ ಭಾವ
ಶಿವ ಶಕ್ತಿಯರ ಸಮ್ಮಿಳಿತ
ನೀನೆಂದು ತೋರಿಸಿದೆ
ಶರಣ ಬಳಗದ ಅಕ್ಕ ನೀನಾದೆ

ಕದಳಿ ವನ ಕರೆದಾಗ ಓಡಿದೆ
ಉಕ್ಕಿತು ಚೈತನ್ಯ ಚಿಲುಮೆ
ಮಲ್ಲಿಕಾರ್ಜುನನ ಹಿರಿಮೆ
ಅವನನಪ್ಪಿದ ಗರಿಮೆ
ಒಂದಾಯಿತು ಒಲುಮೆ

- ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ, ಪುಣೆ.


2 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...