ಶನಿವಾರ, ಮೇ 27, 2023

ಅಂಗಾಂಗ ದಾನ (ಲೇಖನ) - ಶ್ರೀಮತಿ ಕಲ್ಪನಾ ಡಿ.ಎನ್.

ಅಂಗಾಂಗ ದಾನಗಳಲ್ಲಿ ವಿಶಿಷ್ಟ ದಾನವಾಗಿದೆ .ಸುಮಾರು 200 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್ ,ಹೃದಯ, ಪಿತ್ತಜನಕಾಂಗ ಮತ್ತು   ಶ್ವಾಸಕೋಶಗಳ ಅಗತ್ಯವಿದೆ. ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಲಭ್ಯವಾಗುವ ಅವಕಾಶ ಇದ್ದರೂ ದಾನಿಗಳ ಕೊರತೆಯಿಂದ ಸಾಧ್ಯವಾಗುತ್ತಿಲ್ಲ.
ಹೀಗಾಗಿ ಅಂಗಾಂಗ ದಾನಿಗಳಿಂದ ಲಕ್ಷಾಂತರ ಮಂದಿಯ ಜೀವ ನಷ್ಟವಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಅಂಗಾಂಗ ದಾನ ನೋಂದಣಿ ಮಾಡಿಸುವುದರಿಂದ ಮರಣದ ನಂತರವೂ ನಾವು ಜೀವಂತವಾಗಿರುತ್ತೇವೆ.

ಅಂಗಾಂಗ ದಾನಗಳಲ್ಲಿ ಎರಡು ವಿಧಗಳಿವೆ.. 

1.ಜೀವಂತ ವ್ಯಕ್ತಿ ಮಾಡುವ ದಾನ ವ್ಯಕ್ತಿಯ ದೇಹದಲ್ಲಿ ಮರು ಸೃಷ್ಟಿಯಾಗುವ ಅಂಗಾಂಗಗಳನ್ನು ಜೀವಕೋಶಗಳನ್ನು ದ್ರವ್ಯಗಳನ್ನು ದಾನ ಮಾಡುವುದು..
ಉದಾ.. ರಕ್ತದಾನ ,ಚರ್ಮದಾನ ಅಸ್ತಿಮಜ್ಜೆದಾನ, ಕಿಡ್ನಿ ಶ್ವಾಸಕೋಶದ ಭಾಗ ಯಕೃತ್,pancreas ಇತ್ಯಾದಿ..

2. ಎರಡನೆಯ ದಾನ ಮೆದುಳು ನಿಷ್ಕ್ರಿಯಗೊಂಡ ನಂತರ ಅಂಗಾಂಗವನ್ನು ಬೇರೊಬ್ಬ ವ್ಯಕ್ತಿಗೆ ನೀಡುವುದು ಅಥವಾ ಜೋಡಿಸುವುದು ..
ಉದಾ... ಕಣ್ಣುಗಳು ಚರ್ಮ ಮತ್ತು ಒಳಪದರಗಳು,ಹೃದಯ, ಶ್ವಾಸಕೋಶ, ಪಿತ್ತಜನಕಾಂಗ. ಸಣ್ಣ ಕರುಳು, ರಕ್ತನಾಳಗಳು, ಮೇದೋಜೀರಕಾಂಗ, ಕಾರ್ನಿಯ, ಮೂಳೆಗಳು ,ಹೃದಯ ಕವಾಟುಗಳು ಹೀಗೆ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಅಂಕಿ ಅಂಶಗಳ ಪ್ರಕಾರ ನಿಮಿಷಕ್ಕೊಬ್ಬರು ಸಾಯುತ್ತಾರೆ. ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಿದ್ದಲ್ಲಿ ಎಂಟು ಜೀವಗಳು ಪುನರ್ಜನ್ಮ ಪಡೆಯುವ ಅವಕಾಶವಿದೆ ಯೋಚಿಸಿ...

ಬ್ರೈನ್ ಡೆತ್ ಎಂದರೇನು?
 ಅಪಘಾತದಿಂದ ತಲೆಗೆ ಏಟು ಬಿದ್ದು ಅಥವಾ ಇನ್ಯಾವುದೇ ಕಾರಣದಿಂದ ಮೆದುಳಿಗೆ ಘಾಸಿಯಾಗಿ ಸಂಪೂರ್ಣ ರಕ್ತ ಸಂಚಾರ ನಿಂತಿರುತ್ತದೆ. ಆಮ್ಲಜನಕದ ಪೂರೈಕೆ ಸ್ಥಗಿತವಾಗಿರುತ್ತದೆ .ಆದರೆ ಹೃದಯ, ಕಿಡ್ನಿ ,ಶ್ವಾಸಕೋಶ ತನ್ನ ಪಾಡಿಗೆ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ. ವ್ಯಕ್ತಿಯನ್ನು I.C.U ವಿಭಾಗದಲ್ಲಿ ಇಟ್ಟು ಕೃತಕ ಉಸಿರಾಟದ ಮೂಲಕ ಆಮ್ಲಜನಕದ ಪೂರೈಕೆ ಮಾಡುತ್ತಿರುತ್ತಾರೆ . ಕೃತಿಕ ಉಸಿರಾಟದ ವ್ಯವಸ್ಥೆ ತೆಗೆದೊಡನೆ ವ್ಯಕ್ತಿಯು ಸಾವನ್ನಪ್ಪುತ್ತಾರೆ.ವೈದ್ಯರು ಬ್ರೈನ್ ಡೆತ್ ಎಂದು ಘೋಷಿಸಿದ ನಂತರ ಅಂಗಾಂಗಗಳನ್ನು ಮೃತ ವ್ಯಕ್ತಿಯ ವಾರಸುದಾರರು ದಾನ ಮಾಡಬಹುದು.
ಅಂಗಾಂಗ ದಾನ ಮಾಡಿದ್ದಲ್ಲಿ ಸತ್ತು ಹುತಾತ್ಮರಾಗಬಹುದು. ಮತ್ತೊಬ್ಬ ವ್ಯಕ್ತಿಯಲ್ಲಿ ಮರು ಜನ್ಮ ಪಡೆಯಬಹುದು. ಸಾವಿನ ನಂತರವೂ ಸಾರ್ಥಕತೆಯನ್ನು ಪಡೆಯಬಹುದು ಯೋಚಿಸಿ..
ದಾನಿಗಳಿಂದ ಪಡೆದ ಹೃದಯವನ್ನು 4 ಗಂಟೆಯ ಒಳಗೆ ,ಪಿತ್ತಜನಕಾಂಗ 12 ಗಂಟೆಯ ಒಳಗೆ, ಮೂತ್ರಪಿಂಡವನ್ನು 24 ಗಂಟೆಯ ಒಳಗೆ.. ಅಗತ್ಯವಿರುವ ರೋಗಿಗೆ ಜೋಡಿಸಲಾಗುತ್ತದೆ ಇದೇ ರೀತಿ ಚರ್ಮ, ಹೃದಯ ,ಕವಾಟು, ಮೂಳೆಗಳನ್ನು ದಾನ ಮಾಡಲಾಗುತ್ತದೆ. ಸತ್ತ ವ್ಯಕ್ತಿಯಿಂದ ನೇತ್ರದಾನವನ್ನು ನಾಲಕ್ಕರಿಂದ ಆರು ಗಂಟೆಯ ಒಳಗೆ ಬೇರೆಯವರಿಗೆ ಜೋಡಿಸಲಾಗುತ್ತದೆ. ಅಂಗಾಂಗ ದಾನವು ಕೂಡ ಪವಿತ್ರ ದಾನವಾಗಿದೆ..

ಯಾರು ದಾನ ಮಾಡಬಹುದು?
ಸಣ್ಣ ಮಗುವಿನಿಂದ ಹಿಡಿದು ವೃದ್ಧರೂ ಕೂಡ ಅಂಗಾಂಗ ದಾನ ಮಾಡಬಹುದು ಸ್ವೈಚ್ಛೇಯಿಂದ ಯಾರು ಬೇಕಾದರೂ ಅಂಗಾಂಗ ದಾನದ ಸಂಕಲ್ಪ ಮಾಡಬಹುದು. ನಮ್ಮ ದೇಶದಲ್ಲಿ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಯಿಂದಾಗಿ ಅಂಗಾಂಗದಾನಿಗಳ ಸಂಖ್ಯೆ ಕಡಿಮೆ ಇದೆ. ಅಂಗಾಂಗ ದಾನಗಳನ್ನು ಮಾಡಿದರೆ ಮೋಕ್ಷ ಸಿಗುವುದಿಲ್ಲ ಎಂಬ ಮೂಡನಂಬಿಕೆ ಹಲವು ಜನರಲ್ಲಿ ಇದೆ. ನಾವು ಪೂಜಿಸುವ ಗಣಪತಿ ಕೂಡ ಅಂಗಾಂಗ ದಾನದಿಂದ ಆಗಿರುವುದನ್ನು  ನೋಡಬಹುದು.. ಅಂದಮೇಲೆ ಯಾರೂ ಬೇಕಾದರೂ ಅಂಗಾಂಗ ದಾನ ಮಾಡಬಹುದಲ್ಲವೇ..

ಪುರಾಣದಲ್ಲೂ ಕೂಡ ಈ ಬಗ್ಗೆ ಉಲ್ಲೇಖವಿದೆ..
 ವೃತ್ತಾಸುರ ರಾಕ್ಷಸನನ್ನು ಸಂಹರಿಸಲು ದದೀಚಿ ಮುನಿಗಳು ಪ್ರಾಣ ತ್ಯಾಗ ಮಾಡಿದ ನಂತರ ಅವರ ಅಸ್ತಿಯಿಂದ ತಯಾರಿಸಿದ ವಜ್ರಾಯುಧದಿಂದ ವೃತ್ತಾಸುರ ರಾಕ್ಷಸನನ್ನು ಸಂಹರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

80 ರಿಂದ 90 ದಶಕದಲ್ಲಿ ಅಂಗಾಂಗ ಮಾರಾಟ ದಂಧೆ ವ್ಯಾಪಕವಾಗಿ ಹುಟ್ಟಿಕೊಂಡಿತು

ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳು ಸಾರ್ವಜನಿಕರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು.
ಭಾರತದಲ್ಲಿ 1994ರಲ್ಲಿ ಅಂಗಾಂಗ ದಾನವನ್ನು ಸರ್ಕಾರ ಕಾನೂನು ಬದ್ಧಗೊಳಿಸಿದೆ.. 1967ರಲ್ಲಿ ಮೊದಲ ಬಾರಿ ಭಾರತದಲ್ಲಿ ಮೂತ್ರಪಿಂಡ ಕಸಿ ಮಾಡಲಾಯಿತು. 1994ರಲ್ಲಿ ಬದಲಿ ಹೃದಯವನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೋಡಿಸಲಾಯಿತು. 1995ರಲ್ಲಿ ಮದರಾಸಿನ ಆಸ್ಪತ್ರೆಯಲ್ಲಿ ಅಂಗಾಂಗ ಬದಲಿ ಜೋಡಣೆಯನ್ನು ಮಾಡಲಾಯಿತು.
50 ರಿಂದ 55 ಮಂದಿಗೆ ಹೃದಯದ ಅಗತ್ಯವಿದ್ದರೆ 10  ಅಥವಾ 20 ಮಂದಿ ಹೃದಯ ದಾನಿಗಳು ಸಿಗುತ್ತಿದ್ದಾರೆ. ಇದು ವಿಷಾದನೀಯ ಸಂಗತಿ. ಹಾಗಾಗಿ ಸ್ನೇಹಿತರೇ, ಅಪಘಾತದಲ್ಲಿ ಸಂಬಂಧಿಕರು ಮೃತಪಟ್ಟರೆ ಅಂಗಾಂಗ ದಾನ ,ದೇಹದಾನ, ನೇತ್ರದಾನ ಮಾಡಲು ಮನೆಯವರ ಮನವೊಲಿಸಿ, ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಅಥವಾ ಬೆಂಕಿಯಲ್ಲಿ ಸುಟ್ಟು ಹೋಗುವ ಅಂಗಾಂಗಗಳನ್ನು ದಾನ ಮಾಡಲು  ನಿಮ್ಮ ಹೆಸರನ್ನು ನೇತ್ರಧಾಮಗಳಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ನೀವು ನೇತ್ರದಾನ ,ದೇಹದಾನ ಮತ್ತು ಅಂಗಾಂಗ ದಾನಗಳ ನೋಂದಣಿ ಮಾಡಿಸಬಹುದು ಅಥವಾ on-line ಮೂಲಕ ಕೂಡ ನೋಂದಣಿ ಮಾಡಿಸಬಹುದು. ಈ ನಿಟ್ಟಿನಲ್ಲಿ ಸರ್ವರು ಅಂಗಾಂಗ ದಾನ ಮಾಡುತ್ತಾ ಹಲವಾರು ಜನರ ಜೀವವನ್ನು ಉಳಿಸಬೇಕೆಂದು ನಮ್ಮ ಮನವಿ.

- ಶ್ರೀಮತಿ ಕಲ್ಪನಾ ಡಿ.ಎನ್.
ಉಪಾಧ್ಯಕ್ಷೆ, ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...