ಸೋಮವಾರ, ಮೇ 22, 2023

ಕಾಣದ ಮಾಯೆ (ಕವಿತೆ) - ಬಿ. ಎಂ. ಮಹಾಂತೇಶ.

ಹುಲುಜನ್ಮ ಹುಟ್ಟಿಸಿದ
ಈ ಕಾಣದ ಹುಚ್ಚು ಮಾಯೆ...
ಮೂಡಿಸಿದೆ ಆ ಜನ್ಮದ
ಮನದಲ್ಲಿ ಆತುರದ ಛಾಯೆ...

ಗುರುತು ಪರಿಚಯವಿಲ್ಲದವರ
ವಯ್ಯಾರವ ನೋಡುತ ಇಲ್ಲಿ...
ನಾವು ಬಂದಿರುವ ಉದ್ದೇಶವನ್ನು
ಮರೆತಿರುವೆವು ನಾವಿಲ್ಲಿ...

ಕ್ಷಣಿಕದ  ಸಂಬಂಧಗಳಿಗಿಲ್ಲಿ
ಸುಮ್ಮನೆ ಸಮಯದ ನೀರೇರೆಯುತ್ತಿದ್ದೇವೆ...
ನಿಜ ಸಂಬಂಧಗಳು ಸವೆಯುತ್ತಿವೆ
ಎಂಬುದ ಮರೆಯುತ್ತಿದ್ದೇವೆ...

ಈ ಜಾಲದಲಿ ಮಂಗನಂತೆ
ಅಲ್ಲಿಂದ ಇಲ್ಲಿಗೆ ಜಿಗಿಯುತ...
ನಮ್ಮ ಚಿತ್ತದ ಜೊತೆಗೆ
ಹೋಗಿದ್ದೇವೆ ಚಿಂತೆಯಲ್ಲಿ ಜಾರುತ..

ಈ ಮಾಯೆಯೂ ಈಗ ತಂಗಾಳಿಯಾಗಿ
ಆಗಿದೆ ನಮಗೆಲ್ಲ ಮಧುರ...
ಆದರೆ ಮುಂದೊಂದು ದಿನ
ಬಿರುಗಾಳಿಯಾಗಬಹುದು ಎಚ್ಚರ.. ಎಚ್ಚರ....

- ಬಿ. ಎಂ. ಮಹಾಂತೇಶ
SAVT ಕಾಲೇಜ್
ಕೂಡ್ಲಿಗಿ,
9731418615


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...