ಹುಲುಜನ್ಮ ಹುಟ್ಟಿಸಿದ
ಈ ಕಾಣದ ಹುಚ್ಚು ಮಾಯೆ...
ಮೂಡಿಸಿದೆ ಆ ಜನ್ಮದ
ಮನದಲ್ಲಿ ಆತುರದ ಛಾಯೆ...
ಗುರುತು ಪರಿಚಯವಿಲ್ಲದವರ
ವಯ್ಯಾರವ ನೋಡುತ ಇಲ್ಲಿ...
ನಾವು ಬಂದಿರುವ ಉದ್ದೇಶವನ್ನು
ಮರೆತಿರುವೆವು ನಾವಿಲ್ಲಿ...
ಕ್ಷಣಿಕದ ಸಂಬಂಧಗಳಿಗಿಲ್ಲಿ
ಸುಮ್ಮನೆ ಸಮಯದ ನೀರೇರೆಯುತ್ತಿದ್ದೇವೆ...
ನಿಜ ಸಂಬಂಧಗಳು ಸವೆಯುತ್ತಿವೆ
ಎಂಬುದ ಮರೆಯುತ್ತಿದ್ದೇವೆ...
ಈ ಜಾಲದಲಿ ಮಂಗನಂತೆ
ಅಲ್ಲಿಂದ ಇಲ್ಲಿಗೆ ಜಿಗಿಯುತ...
ನಮ್ಮ ಚಿತ್ತದ ಜೊತೆಗೆ
ಹೋಗಿದ್ದೇವೆ ಚಿಂತೆಯಲ್ಲಿ ಜಾರುತ..
ಈ ಮಾಯೆಯೂ ಈಗ ತಂಗಾಳಿಯಾಗಿ
ಆಗಿದೆ ನಮಗೆಲ್ಲ ಮಧುರ...
ಆದರೆ ಮುಂದೊಂದು ದಿನ
ಬಿರುಗಾಳಿಯಾಗಬಹುದು ಎಚ್ಚರ.. ಎಚ್ಚರ....
- ಬಿ. ಎಂ. ಮಹಾಂತೇಶ
SAVT ಕಾಲೇಜ್
ಕೂಡ್ಲಿಗಿ,
9731418615
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ