ಸೋಮವಾರ, ಮೇ 22, 2023

ಕೋಪ (ಕವಿತೆ) - ಜಿ. ಟಿ. ಆರ್ ದುರ್ಗ, ಬಂಗಾರಪೇಟೆ.

ಮನುಷ್ಯನಿಗೆ ಬಹಳ ಕೋಪ 
ಅದೆಲ್ಲಿಂದ ಬರುವುದೊ
ಅದರ ಗುಟ್ಟೇನು ತಿಳಿಯದು
ತಡೆಯಲಾರದಷ್ಟು ಕೋಪ 

ಅಬ್ಬಬ್ಬಾ ಕೋಪ ನತ್ತಿಗೇರಿದರೆ
ತಡೆದು ಕೊಳ್ಳದೊಷ್ಟು ಕಡು ಕೋಪ
ಶಾಂತಿ ಇಲ್ಲದೆ ಉದ್ರೇಕಗೊಳ್ಳುತ್ತ
ತನಗ್ಯಾರು ಸಿಗುವರೋ ಅವರೊಂದಿಗೆ ಜಗಳ

ತಾಳ್ಮೆ ಇಲ್ಲದ ಮನಸ್ಸು 
ಚೆಂಚಲತೆಯಿಂದ ಯಾರನ್ನಾದರೂ
ಕೊಂದು ಬಿಡುವಷ್ಟು ಕೋಪ
ಸ್ವಲ್ಪವೂ ಯೋಚಿಸದೆ ಆತುರ

ತನ್ನ ಮನಸ್ಸು ಹಿಡಿತವಿಲ್ಲದೆ
ಎಲ್ಲರ ಮೇಲೆ ಎಗರಾಡುತ್ತಾ
ಚೀರಾಡುತ್ತಾ ತನ್ನೆಲ್ಲಾ ಒಳ್ಳೆ ಮನಸ್ಸು
ಹಾಳು ಮಾಡುವುದು ಈ ಕೋಪ

ತಾಳ್ಮೆಯಿಂದ ಎಲ್ಲರನ್ನು ಕಂಡರೆ
ಸ್ವರ್ಗದಂತ ಸುಖ ಸಿಗುವುದು
ಕೋಪದಿಂದ ಎಲ್ಲರನ್ನು ಕಂಡರೆ
ನರಕವೆ ಪ್ರಾಪ್ತಿಯಾಗುವುದು ಜೋಕೆ ಮನುಜ.
- ಜಿ. ಟಿ. ಆರ್ ದುರ್ಗ, ಬಂಗಾರಪೇಟೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...