ನಮ್ಮನೆಯ ಅಂಗಳದಿ ನಾ ಬೆಳೆಸಿದ ಗಿಡವೊಂದು
ಹೂ ಒಂದು ಅರಳಿಸಿದೆ ನೋಡು ಬಾರಾ....
ಘಮ್ ಎಂದು ಹೊರಸೂಸಿ ಅಂಗಳಕ್ಕೆ ಮೆರುಗಾಗಿ
ಅರಳಿ ನಿಂತಿದೆ ಗೆಳತಿ ನೋಡು ಬಾರಾ.....
ಮಕರಂದ ದೌತಣಕ್ಕೆ ದುಂಬಿಗಳು ನೋಡಲ್ಲಿ
ನಾ ಮುಂದು ತಾ ಮುಂದು ಎನ್ನುತಲೀ
ಝೇಂಕಾರ ನಿನಾದವ ಕೇಳಿಲ್ಲಿ...
ಆ ಸಡಗರವ ನೀನೊಮ್ಮೆ ನೋಡುಬಾರಾ....
ಅರಳಿ ನಿಂತಿರುವ ಹೂವನ್ನು ಬಳ್ಳಿಯಿಂದ ಅಗಲುತಾ
ಅವನ್ ಹಸಿವ ನೀಗಿಸಲು ನೋವಲ್ಲೀ ನಗುನಗುತಾ
ಬುಟ್ಟಿಯೊಳಗೊಂದಾಗಿ,ಹಾರದೊಳಗೊಂದಾಗಿ
ನಗುತಲಿದೆ...ಗೆಳತಿ ಅದನ್ನೊಮ್ಮೆ ಕೊಳ್ಳುಬಾರಾ....
ಅರಳಿ ನಿಂತೆನು ನಾ... ಪಯಣ ಎಲ್ಲಿಗೆಂದು ತಿಳಿಯದು
ಮಸಣಕ್ಕೋ,ದೇವರ ಸನ್ನಿಧಿಗೋ ಒಂದೂ ತಿಳಿಯುತ್ತಿಲ್ಲ ಎಂಬ ಹೂವಿನ ಸ್ವಗತದಿ ಎಂದೇನುತ್ತಾ
ನೋವಲ್ಲಿ ಬಾಡುತ್ತಿದೆ ....ಗೆಳತೀ ಅದ ಕೇಳಿ ಸಂತೈಸಿ ಬಾರಾ.....
ಹೇ ಹೂವೇ....ನಿನ್ನ ಸೌಂದರ್ಯಕ್ಕೆ ಮಾರು ಹೋದವರಿಲ್ಲ
ನಿಸರ್ಗ ರಮಣೀಯತೆ ಗೆ ನೀನೇ ಕಾರಣ
ಘಮವಾಗಿ, ಸುಮವಾಗಿ, ಕುಸುಮವಾಗೀ ಕೈ ಬೀಸಿ
ಕರೆಯುತ್ತಿದೆ ಗೆಳತಿ ನೀನೊಮ್ಮೆ ಹೂವನ್ನು ಮುಡಿಯಬಾರಾ......
ಕೆಲವೇ ಗಂಟೆಗಳು ಬದುಕು ,ಉಸಿರು ಆರುವ ಮುನ್ನ
ಎಲ್ಲರಿಗೂ ಬೇಕಾಗು, ನೂರು ವರ್ಷಗಳ ನಿನ್ನ ಬದುಕೇ
ವ್ಯರ್ಥ ಎಂಬರ್ಥದಿ ಕಲಿಸುವ ಪಾಠವನ್ನು
ಮನುಜನಿಗೆ ತಿಳಿಸಿ ಹೇಳಿ ಬಾರಾ....
- ಗಂಗಾಧರ್ ಗೌಡರ್.
ಸಾರಿಗೆ ಇಲಾಖೆ ಧಾರವಾಡ (ದಾಸಬಾಳ)9886652974.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ