ಬಿತ್ತಿದ ಬೀಜದ ಬೇರು ನೆಲಕೆ,
ಮೊಳಕೆ ಏಕೆ ಮೇಲಕೆ...?
ಕೈಗೆ ಎಟುಕದ ಮುಗಿಲೆ, ನಮಗೇಕೆ
ಇಲ್ಲ ನೀ ಬೀಳಬಹುದೆಂಬ ಜ್ವಾಕೆ...?
ಹಾರೋ ಹಕ್ಕಿಗೆ ಗೂಡು ಕಟ್ಟೋದ,
ಕಳಿಸಿದ ಕಲಿ ಯಾರು..?
ಹರಿಯುವ ನೀರಿಗೆ, ಅಡಿ ಅಡಿಗೆ
ಹಾದಿಯ ಮಾಡಿದವನಾರು..?
ಬಾಯಿ ಇಲ್ಲದ ಜೀವಿಗಳಿಗೆ
ಭಾವವನು ತುಂಬಿದವನಾರು..?
ಬೆಟ್ಟದ ಮೇಲಿನ ಕಲ್ಲು
ವಾಲದಂತೆ ಬಲದಿ ಹಿಡಿದವನಾರು...?
ಸುಮ್ಮನೆ ಕುಳಿತು ಎಲ್ಲವ,
ಯೋಚಿಸಿದಾಗ ಇಲ್ಲಿ...
ಅನಿಸುತ್ತದೆ ಒಮ್ಮೊಮ್ಮೆ ಆ ದೇವರು,
ಇದ್ದನೆಂದು ಪ್ರಕೃತಿಯ ರೂಪದಲ್ಲಿ....
- ಬಿ ಎಂ ಮಹಾಂತೇಶ
SAVT ಕಾಲೇಜ್ ಕೂಡ್ಲಿಗಿ.
9731418615.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ