ಸೋಮವಾರ, ಜೂನ್ 5, 2023

ಕೇಳುವವರಾರು ನನ್ನ ಧ್ವನಿಯ (ಕವಿತೆ) - ಭೀಮಣ್ಣ ಹತ್ತಿಕುಣಿ.

ಕೇಳುವವರಾರು ನನ್ನ ಧ್ವನಿಯ
ಸಮಾನತೆ ಸಾರಿದ ಅಂಬೇಡ್ಕರ ಭೂಮಿಯಲ್ಲಿ!!
ಆಸೆಯ ಬಚ್ಚಿಟ್ಟು ಬದುಕಿದೆ ನಾನು 
ನೀ ತೋರಿದ ದಾರಿಯಲಿ ಅಪ್ಪ
ಕೇಳುವರಾರು ನನ್ನ ಧ್ವನಿಯ 
ಮನಸಲ್ಲಿ ಕನಸೊಂದ ಕಟ್ಟಿ ಬಿಳಿಸಿದೆ ನಾನು 
ಸಮಾನತೆ ಸಾರಿದ ಅಂಬೇಡ್ಕರ ಭೂಮಿಯಲ್ಲಿ 
ಕೇಳುವವರಾರು ನನ್ನ ಧ್ವನಿಯ
ಬದುಕೊಂದು ಕಟ್ಟಲು ಬಿಡಿ 
ಸಮಾಜದಲ್ಲಿ ನನಗೊಂದು ಜಾಗ ಕೊಡಿ
ಹೆತ್ತು ಹೇರಲು ಹೆಣ್ಣು ಸಾಕಾ
ನನ್ನ ಬದುಕು ನನಗೆ ಬೇಕಾ
....ಬದುಕಲು ಬಿಡಿ....
ಕೇಳುವವರಾರು ನನ್ನ ಧ್ವನಿಯ 
ಸಮಾನತೆ ಸಾರಿದ ಅಂಬೇಡ್ಕರ್ ಭೂಮಿಯಲ್ಲಿ
   
 - ಭೀಮಣ್ಣ ಹತ್ತಿಕುಣಿ, ಯಾದಗಿರಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...