ಸೋಮವಾರ, ಜೂನ್ 5, 2023

ಕೇಳುವವರಾರು ನನ್ನ ಧ್ವನಿಯ (ಕವಿತೆ) - ಭೀಮಣ್ಣ ಹತ್ತಿಕುಣಿ.

ಕೇಳುವವರಾರು ನನ್ನ ಧ್ವನಿಯ
ಸಮಾನತೆ ಸಾರಿದ ಅಂಬೇಡ್ಕರ ಭೂಮಿಯಲ್ಲಿ!!
ಆಸೆಯ ಬಚ್ಚಿಟ್ಟು ಬದುಕಿದೆ ನಾನು 
ನೀ ತೋರಿದ ದಾರಿಯಲಿ ಅಪ್ಪ
ಕೇಳುವರಾರು ನನ್ನ ಧ್ವನಿಯ 
ಮನಸಲ್ಲಿ ಕನಸೊಂದ ಕಟ್ಟಿ ಬಿಳಿಸಿದೆ ನಾನು 
ಸಮಾನತೆ ಸಾರಿದ ಅಂಬೇಡ್ಕರ ಭೂಮಿಯಲ್ಲಿ 
ಕೇಳುವವರಾರು ನನ್ನ ಧ್ವನಿಯ
ಬದುಕೊಂದು ಕಟ್ಟಲು ಬಿಡಿ 
ಸಮಾಜದಲ್ಲಿ ನನಗೊಂದು ಜಾಗ ಕೊಡಿ
ಹೆತ್ತು ಹೇರಲು ಹೆಣ್ಣು ಸಾಕಾ
ನನ್ನ ಬದುಕು ನನಗೆ ಬೇಕಾ
....ಬದುಕಲು ಬಿಡಿ....
ಕೇಳುವವರಾರು ನನ್ನ ಧ್ವನಿಯ 
ಸಮಾನತೆ ಸಾರಿದ ಅಂಬೇಡ್ಕರ್ ಭೂಮಿಯಲ್ಲಿ
   
 - ಭೀಮಣ್ಣ ಹತ್ತಿಕುಣಿ, ಯಾದಗಿರಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...