ಶುಕ್ರವಾರ, ಜೂನ್ 23, 2023

ಸಂಕ್ರಾಂತಿ- ಕ್ರಾಂತಿ (ಕವಿತೆ) - ಡಾ. ಶಿಲಾಸೂ.

ನಿಸರ್ಗದತ್ತ ಓಡೋಡುತ್ತ
ಹೊಸತುಗಳನು ಹೊಸೆಯುತ !!
ನಿಸರ್ಗ ಬದಲಾವಣೆ ಸ್ವೀಕರಿಸುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ನಿತ್ಯ ಸತ್ಯ ನುಡಿಯುತ
ಸತ್ಯದ ಸಿಹಿಯ ಸವಿಯುತ !!
ಸರ್ವರಿಗೂ ಪ್ರೀತಿಯಂಚುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ದ್ವೇಷ ಅಸೂಯೆ ದುಃಖ ದುಮ್ಮಾನ
ಮೇಲು ಕೀಳು ಮನದಿ ಅಳಿಸುತ !!
ಎಲ್ಲರೊಂದೆಂಬ ಭಾವದಡಿ ನಲಿಯುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ಇರುವುದೊಂದೆ ಬದುಕು ಇರುವುತನಕ ನಗುತ 
ಎಲ್ಲರೊಳು ಬೆರೆಯುತ ಎಲ್ಲರನು ಪ್ರೀತಿಸುತ !!
ಪ್ರೀತಿ ಕೊಟ್ಟು ನೀತಿ ಇಟ್ಟು ನಿಸರ್ಗವುಳಿಸುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ಮತ್ತೊಮ್ಮೆ ಮರಳಲಿ ಸಂಕ್ರಾಂತಿ
ಆಗಬೇಕಿದೆ ಒಂದೆಂಬ ಕ್ರಾಂತಿ!!
ತೊಲಗಬೇಕಿದೆ ಡಂಬಾಚಾರದ ಬ್ರಾಂತಿ
ಒಲಿಯುವುದು ಸುಖ ಶಾಂತಿ ಆಚರಿಸುವ ಸಂಕ್ರಾಂತಿ !!

ಎಳ್ಳಿನಂತೆ ಮನಸಿರಲಿ
ಬೆಲ್ಲದಂತೆ ಸಿಹಿಯಿರಲಿ !!
ಕಹಿ ದೂರ ತೊಲಗಲಿ
ಸ್ನೇಹಗಳ ಕ್ರಾಂತಿಯಾಗಲಿ ಆಚರಿಸುವ ಕ್ರಾಂತಿ !!

ಎಳ್ಳಿನಂತೆ ಬಾಳು ಏಳ್ಗೆಯಾಗಲಿ
ಬೆಲ್ಲದಂತೆ ಬಾಳು ಬೆಳಕಾಗಲಿ !!
ತರ ತರದ ತಿಂಡಿ ತಿನಿಸು ಸ್ನೇಹ ಬೆಸೆಯಲಿ 
ಬದುಕು ಕ್ರಾಂತಿಯಾಗಲಿ ಸಂಕ್ರಾಂತಿ ಹರುಷ ಹೊತ್ತು ತರಲಿ.

- ಡಾ. ಶಿಲಾಸೂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...