ಶುಕ್ರವಾರ, ಜೂನ್ 23, 2023

ಅಲ್ಲಿ ನೋಡಿ..(ಕವಿತೆ) - ಭರತ್ ಅರ್.

ಇಬ್ಬರು ಮಹಿಳೆಯರ
ಆರ್ತನಾದ ಇಡೀ ಭಾರತವನ್ನೇ 
ಸುತ್ತುವರೆದಿದೆ. 
ಬಿಲ್ಕಿಸ್ ಬಾನು,ಉನ್ನಾವೊ 
ಮತ್ತು ಹತ್ರಾಸ್ನಂತಹ 
ಹಲವು ಹೆಣ್ಜೀವಗಳ 
ನರಳಿಕೆಯೂ ಸಹ. 
ಕಾಳಿ-ಚಾಮುಂಡಿಯರ 
ಪೂಜಿಸುವ ನೆಲದಲ್ಲಿಂದು 
ಇವರೆಲ್ಲರನ್ನಿಡಿದು 
ಎಳೆದಾಡಿ, ಭಾರತಮಾತೆಗೆ
ಕೋಳಗಳ ತೊಡಿಸಲಾಗಿದೆ.

ಎಂದಿನಂತೆ "ಪುರುಷ"ರ 
ಭವನಕ್ಕಿಂದು ಮಹಿಳೆಯರ
ನಿಷೇಧ...!
ಸರ್ವವನ್ನು ಉಂಡವನೀಗ
ಹೆಣ್ತನದ ಪ್ರಾಣ ಹಿಂಡಿ 
ಅಧಿಕಾರದ ದಂಡ ಹಿಡಿದಿದ್ದಾನೆ. 

ಈಗಲೂ 
ಗಂಡಸರೆನಿಸಿಕೊಂಡವರ 
ಉದ್ರೇಕಿಸುವ,
ಮಾಯೆಯಾಗಿ ಕಾಡುವ 
"ಹಣೆಪಟ್ಟಿ"ಯ ಧ್ವನಿ 
ನಮ್ಮ "ಹೆಮ್ಮೆ"ಯ 
"ಗಂಡ"ಸರಿಂದಾಚೆ 
ಹೊಮ್ಮುತ್ತಲೇ ಇದೆ...

- ಭರತ್ ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...