ಶನಿವಾರ, ಜೂನ್ 3, 2023

ಜ್ಞಾನದ ದೀವಿಗೆ ಬುದ್ಧ (ಕವಿತೆ) - ನಾಗರಾಜು.ಹೆಚ್.ಎಂ, ಮಧುಗಿರಿ.

ಜಗದ ಜಂಜಾಟವ ಕಳಚಿ 
ಭವದ ಬಂಧನವ ಬಿಡಿಸಿ
ತ್ಯಾಗದ ಬದುಕಿಗೆ ನಾಂದಿಯ ಹಾಡಿ
ಜಗಕೆ ಬೆಳಕ ನೀಡಲು ಹೊರಟ ಮಹಾ ಮಹಿಮಾ ನೀನು

ಮಡದಿ ಮಕ್ಕಳ ತೊರೆದೆ
ರಾಜ್ಯ ವೈಭೋಗವ ಮರೆತೆ
ಬಂದ ಹಾದಿಗೆ ಸುಂಕವಿಲ್ಲವೆನುತ
ಆಸೆಯೇ ದುಃಖಕ್ಕೆ ಮೂಲವೆಂದ
ಮಹಾ ಮಾನವತಾವಾದಿ ನೀನು

ಕತ್ತಲೆಯ ಅಂಧಕಾರವ ಅಳಿಸಿ
ಬೆಳಕಿನ ಜ್ಯೋತಿಯ ಬೆಳಗಿಸಿ
ಮನುಜ ಮನುಜನೆಂಬುದ ತಿಳಿಸಿ
 ದುಃಖ ದುಮ್ಮಾನ  ಬಿಡಿಸಿ
ಅಮ್ಮು - ಬಿಮ್ಮು ಕೊನೆಗಾಣಿಸಿದ
ಮಹಾ ತಪಸ್ವಿ ನೀನು

ಮಾನವೀಯತೆ ಮೆರೆಸಿ
ಜ್ಞಾನಯೋಗಿಯಾಗಿ ನಿಂದು 
ಅರಿವಿನ ಪಯಣವ ತೋರಿ
ಜಗದ ಬೆಳಕಾಗಿ ಯುಗಕೆ ಹೆಸರಾದ 
ಯುಗಪುರುಷ ನೀನು 

- ನಾಗರಾಜು.ಹೆಚ್.ಎಂ, ಮಧುಗಿರಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...