ಬುಧವಾರ, ಸೆಪ್ಟೆಂಬರ್ 13, 2023

ನನ್ನ ಕಂದ (ಭಾವಗೀತೆ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಮಗುವೆ ನಿನ್ನ ನಗುವಿನಲ್ಲಿ 
ಗೆಲುವಿನಲೆಯ ಕಂಡೆನಿಲ್ಲಿ 
ಬಸಿರ ಹಸಿರ ಉಡುಗೆಯಲ್ಲಿ 
ಏನಿದು ಹೊಸ ಅನುಭವ... l 
                                 llಪಲ್ಲವಿ ll
ನನ್ನ ಮಡಿಲ ಕುಡಿಯು ನೀನು 
ನಮ್ಮ ಬಾಳಿನ ಬೆಳಕು ನೀನು 
ಗಗನದಿ ಹೊಳೆವ ತಾರೆಯಂತೆ 
ಬೆಳಗು  ನೀನೆಂದೆಂದಿಗೂ...... ಬೆಳಗು
  ನೀನೆಂದೆಂದಿಗೂ.....
                                 ಚರಣ ೧
ನಿನ್ನ ತುಂಟಾಟದಾಟಗಳು 
ನಿನ್ನ ಮುಗ್ಧ ಅಳುವಿನ ಕರೆಯು
ಸೆಳೆಯಿತೆನ್ನನು ನಿನ್ನ ಬಳಿಯಲಿ
ಬಾಚಿತಬ್ಬಿಕೊಳ್ಳಲು.... ಅಪ್ಪಿ ಮುದ್ದಾಡಲು...
                                   ಚರಣ ೨

ನಾಡಿನೊಳಿತಿಗಾಗಿ ಬಾಳು 
ನಾಡಜನರ ಕುವರನಾಗು 
ನಾದಲೋಕದ ಮುರಳಿಯಾಗು 
ನಾರಿದೇವಕಿ ಕಂದ ಕೃಷ್ಣನಂತಾಗು....
                                      ಚರಣ ೩

- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...