ಬುಧವಾರ, ಸೆಪ್ಟೆಂಬರ್ 13, 2023

ನಾನಾಗಬಾರದೇಕೆ ಮನೆಯಲೊಂದು. ಟಿ. ವಿ. - ಸವಿತಾ ಆರ್ ಅಂಗಡಿ. ಮುಧೋಳ.

ಮುಗ್ಧ ಮನಸ್ಸಿನ ಮಗು ನೀನು
 ನಿನ್ನ ಭಾವನೆಯನ್ನು ಅರ್ಥೈಸಿಕೊಳ್ಳುವ ಮನಸ್ಸಿಲ್ಲ
 ನಿನ್ನ ಕಂಬನಿಗೆ ಮಿಡಿಯುವ ಮನವಿಲ್ಲ
 ನಿನಗೆ ಕರುಣೆ ತೋರುವ ತಂದೆ ತಾಯಿಯರಿಲ್ಲ
 ನೀನೊಂದು ಮುಗ್ಧ ಮನಸ್ಸಿನ ಮಗು.

 ಬಿಡುವಿಲ್ಲದೆ ತಮ್ಮ ಕೆಲಸಕ್ಕೆ ಬಡಿದಾಡುವರು
 ಮಗುವಿನ ಅಂತರಾಳವನ್ನು ತಿಳಿಯುವರಾರು
 ಕಷ್ಟ ಹೇಳಿಕೊಂಡರು ಕೇಳುವರಾರು
 ಮುಗ್ಧ ಮನಸ್ಸಿಗೆ ಬೇಕು ಅಂತರಾಳದ ಪ್ರೀತಿ
ಇದಾವದು ಸಿಗದೇ ಬಳಲುವುದು ಮುಗ್ಧ ಮನಸ್ಸು

 ಅಂದುಕೊಂಡಿದ್ದು ಮಗು ಮನಸ್ಸಿನಲ್ಲಿ
 ತಂದೆ ತಾಯಿಂದರಿಗೆ ಟಿವಿ ಮೇಲಿದೆ ಹೆಚ್ಚಿನ ಪ್ರೀತಿ
 ನಾನೇಕೆ ಆಗಬಾರದು ಮನೆಯಲೊಂದು ಟಿ. ವಿ
 ಅದಕ್ಕಾಗಿ ಕೊಡುವರು ಹೆಚ್ಚಿನ ವೇಳೆಯನು
 ಮುಗ್ಧ ಹೃದಯಕ್ಕೆ ಎಲ್ಲಿ ಸಿಗುವುದು ತಂದೆ ತಾಯಿಯ ಪ್ರೀತಿ

 ಸಂತಸವನ್ನು ಹಂಚಿಕೊಳ್ಳುವರು ಆ ಟಿವಿ ಜೊತೆ
 ಮಗುವಿಗೆಲ್ಲಿ ಸಿಗುವುದು ಸಂತಸದ ಕ್ಷಣಗಳು
 ಅಮ್ಮನಿಗೆ ಬೇಕು ಟಿವಿ ಸೀರಿಯಲ್ ಗಳ ಭರಾಟೆ
 ಅಪ್ಪನಿಗೆ ಬೇಕು ಮೊಬೈಲ್ ಮೋಜು ಮಸ್ತಿ
 ಕೊಡೋರು ಸಾಕಷ್ಟು ಸಮಯವನ್ನು ಟಿವಿ ಮೊಬೈಲ್ ನೋಡಲು

 ಕಥೆ ಕೇಳಿ ಮಲಗಬೇಕೆಂಬ ಕಾತುರ ಮಗುವಿಗೆ
 ಹೇಳಲಾರದೆ ಸುಸ್ತಾಗಿ ಮಲಗುವರು
ಮುಗ್ಧ ಮನಸ್ಸಿಗೆ ಆಗ ಅನಿಸಿತು
 ನಾನೇಕೆ ಆಗಬಾರದು ಅಪ್ಪ ಅಮ್ಮಂದಿರ ಟಿವಿ

 ದೇವರಲ್ಲಿ ಪ್ರಾರ್ಥಿಸಿತು ಮಗು
 ನಾನಾಗುವೆ ಅಪ್ಪ-ಅಮ್ಮಂದಿರ ಟಿವಿ
 ಸಿಗುವುದು ನನಗೆ ಆಗ ಪ್ರೀತಿ ವಾತ್ಸಲ್ಯ
 ನಾನಾಗಬೇಕು ಅಪ್ಪ ಅಮ್ಮಂದಿರ ಟಿವಿ.


- ಸವಿತಾ ಆರ್ ಅಂಗಡಿ. ಮುಧೋಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...