ಬುಧವಾರ, ಸೆಪ್ಟೆಂಬರ್ 13, 2023

ಭ್ರಷ್ಟಾಚಾರವೆಂಬ ಪೆಡಂಭೂತ ಬಲೆಯಲ್ಲಿ ಬಡವರು (ಲೇಖನ) - ಅರ್ಚನ ಹೊನಲು, ಅತ್ತಿಬೆಲೆ.

ಮೌಲ್ಯಗಳ ಕುಸಿತದಿಂದ ದಿನದಿಂದ ದಿನಕ್ಕೆ ಸಮಾಜದಲ್ಲಿ ಭ್ರಷ್ಟಾಚಾರ ತೀವ್ರತೆ ಹೆಚ್ಚುತ್ತಿದೆ. ಬಡವರ ವಿಷಯದಲ್ಲಿ ಈ ಭ್ರಷ್ಟಾಚಾರವೆಂಬ ಪೆಡಂಭೂತ ತನ್ನ ವಿಸ್ತಾರವನ್ನು ಅತ್ಯಂತ ವ್ಯಾಪಕವಾಗಿಸಿಕೊಂಡು ಬಡವರ ರಕ್ತ ಹೀರುತ್ತದೆ. ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಬಡವರು ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಕೊನೆಗೆ ಯೋಜನೆಯ ಸಹವಾಸವೇ ಬೇಡ ಎಂದು ಬೇಸತ್ತು ಸರ್ಕಾರಗಳನ್ನು ಶಪಿಸುತ್ತಿರುವುದು ಸಾಮಾನ್ಯವಾಗಿದೆ. ಯೋಜನೆಗಳ ಮಂಜೂರಾತಿಗಾಗಿ ಹಾಗೂ ಅವುಗಳ ಲಾಭ ಪಡೆಯುವ ಸಮಯದಲ್ಲಂತೂ ಅಧಿಕಾರಿಗಳು ತಮ್ಮ ಹಣದಾಹಿತನವನ್ನು ಪ್ರದರ್ಶಿಸಿ ಬಡವರ ಕಣ್ಣೀರಿಗೆ ಕಾರಣವಾಗುವ ಸನ್ನಿವೇಶಗಳು ಪ್ರಬುದ್ಧರ ಆಕ್ರೋಶ ಹೆಚ್ಚುವಂತೆ ಮಾಡುತ್ತದೆ. 

ಭ್ರಷ್ಟಾಚಾರ ಇಂದು ನೆನ್ನೆಯದಲ್ಲ ಕಾಲಕಾಲದಿಂದಲೂ ತಲತಲಾಂತರದಿಂದಲೂ ಹರಿದು ಬರುತ್ತಿರುವ ಒಂದು ಪಿಡುಗಾಗಿದೆ. ದೇಶದಲ್ಲಿ ಶೇ.70 ರಿಂದ 80 ರಷ್ಟು ಭ್ರಷ್ಟಾಚಾರಿಗಳು ಇದ್ದಾರೆ. ಕೇವಲ ರಾಜಕಾರಣಿಗಳು ಅಧಿಕಾರಗಳ ಮಟ್ಟದಲ್ಲಿ ಮಾತ್ರವಲ್ಲ, ಇತರೆ ಕ್ಷೇತ್ರಗಳಲ್ಲೂ ಇದೆ. ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ನಾವೇ ಕಾರಣ ಜನರು ಭ್ರಷ್ಟಾಚಾರ ಪ್ರೋತ್ಸಾಹಿಸಿದ ಪರಿಣಾಮ ಒಂದು ರೀತಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಲ್ಲರಿಗೂ ಭ್ರಷ್ಟಚಾರಕ್ಕೆ ಕಾರಣರಾಗುತ್ತಿದ್ದಾರೆ. “ಭ್ರಷ್ಟಾಚಾರ ರಹಿತ ಸಮಾಜ ಹೇಗೆ ಎನ್ನುವ ಜಿಜ್ಞಾಸೆ ನಮ್ಮನ್ನು ಕಾಡುತ್ತದೆ”, ಒಮ್ಮೆಲೆ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ. ಎಂಬ ಭ್ರಮೆ ಇಲ್ಲ ಆದರೆ ಇದರ ವಿರುದ್ಧ ದೇಶದಲ್ಲಿ ಸಾರ್ವತ್ರಿಕ ಚಳುವಳಿ ಹೋರಾಟಗಳು ನಡೆಯಬೇಕು ಎಲ್ಲರೂ ಆದರ್ಶ, ಸರಳ ಜೀವನ ರೂಢಿಸಿಕೊಳ್ಳಬೇಕು. 

ಭ್ರಷ್ಟಾಚಾರ ಎಂಬ ಪಿಡುಗು ಎಷ್ಟು ಆವರಿಸಿಬಿಟ್ಟಿದೆ ಎಂದರೆ ಕೆಲವು ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕಾಗಿತ್ತು.  ಆದರೆ ಇಂದು  ಡೆತ್ ಸರ್ಟಿಫಿಕೇಟ್ ಗೂ, ಬರ್ತ್ ಸರ್ಟಿಫಿಕೇಟ್ ಗೂ ಅಲ್ಲದೇ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷನ್ ಕಾರ್ಡ್, ಗುರುತಿನ ಚೀಟಿ , ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹೀಗೆ ಮುಂತಾದವು ಸಣ್ಣ ಪುಟ್ಟ ಕೆಲಸದಲ್ಲಿಯೂ ಭ್ರಷ್ಟಾಚಾರ ರಾರಾಜಿಸುತ್ತಿದೆ. ಈ ಲಂಚವನ್ನು ಪರ್ಸೇಂಟೇಜ್ ಲೆಕ್ಕದಲ್ಲಿ ಪಡೆಯಲಾಗುತ್ತದೆ. ಕಡತ ವಿಲೇವಾರಿ ಮಾಡಲು ಲಂಚ ನೀಡಬೇಕಾಗಿದೆ. ಇದರ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ ದಕ್ಷತೆ ಪ್ರಾಮಾಣಿಕತೆಯೇ ಕುಸಿದಿದೆ. ಸಮಾಜ ಮತ್ತು ಸರ್ಕಾರದ ಮೇಲೆ ನಂಬಿಕೆಯೆ ಇಲ್ಲವಾಗಿದೆ ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಭ್ರಷ್ಟಾಚಾರವು ದೈನಂದಿನ ಜೀವನದ ಅನುಭವವಾಗಿದೆ. ಹೊಸ ಗುರುತಿನ ಚೀಟಿ ನೀಡಲು ಅಧಿಕಾರಿಶಾಹಿಗೆ ಹಣ, ಆಸ್ಪತ್ರೆಯಲ್ಲಿ ಉಚಿತವಾಗಿ ವಿತರಿಸಬೇಕಾದ ಕುಟುಂಬ ಯೋಜನೆ ಮಾತ್ರಗಳನ್ನು ಪಡೆಯಲು ಅನಧಿಕೃತ ಪಾವತಿ ಅಥವಾ ಕಿರುಕುಳವನ್ನು ತಪ್ಪಿಸಲು ಪೋಲೀಸರಿಗೆ ಸಾಂದರ್ಭಿಕ ಲಂಚ ಈ ರೀತಿಯ ಭ್ರಷ್ಟಾಚಾರವು ಒಟ್ಟಾರೆಯಾಗಿ ಸಮಾಜದ ಮೇಲೆ ಬೀರುತ್ತದೆ. ಆದರೆ ಅದರಿಂದ ಹೆಚ್ಚು ಬಳಲುತ್ತಿರುವವರು ಬಡವರು. 

ಭ್ರಷ್ಟಾಚಾರವು ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ. ಆದರೆ ಇದು ಹೆಚ್ಚಾಗಿ ಬಡವರ ಮೇಲೆ ಅಸಮಾನ ಪರಿಣಾಮ ಬೀರುತ್ತದೆ. ಭ್ರಷ್ಟಾಚಾರವು ಅವರಿಗೆ ಅಗತ್ಯವಿರುವ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಕಾನೂನು ಸೇವೆಗಳಿಗೆ ಅವರ ಪ್ರವೇಶವನ್ನು ಮತ್ತಷ್ಟು ಮಿತಿಗೊಳಿಸಬಹುದು. ಭ್ರಷ್ಟಾಚಾರದಿಂದ ಆಗುವ ಹಾನಿ ಬಹುಪಟ್ಟು ಇದು ಪ್ರಜಾಪ್ರಭುತ್ವದ ತಳಹದಿಯ ಮೇಲೆ ದಾಳಿ ಮಾಡಬಹುದು. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕುಗ್ಗಿಸಬಹುದು ಕಾನೂನುಗಳು ಮತ್ತು ನಿಬಂಧನೆಗಳನ್ನು ತಿರುಚಬಹುದು. ಅಧಿಕಾರಶಾಹಿ ಅಡೆತಡೆಗಳನ್ನು ಸೃಷ್ಟಿಸಬಹುದು,ಇದರಿಂದಾಗಿ ನಮ್ಮ ದೇಶದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. 

ಭ್ರಷ್ಟಾಚಾರವು ಈಗಾಗಲೇ ಬಿಗಿಯಾದ ಬಜೆಟ್‌ನಲ್ಲಿ ತಿನ್ನುತ್ತದೆ ಮತ್ತು  ಹೆಚ್ಚುವರಿ ವೆಚ್ಚಗಳು ಇತರ ಮೂಲಭೂತ ಅಗತ್ಯತೆಗಳ ಪ್ರದೇಶಗಳಲ್ಲಿ ಕಡಿತವನ್ನು ಅರ್ಥೈಸುತ್ತದೆ. ಬಡವರು ತಮ್ಮ ಆದಾಯದ ಹೆಚ್ಚಿನ ಪಾಲನ್ನು ಶ್ರೀಮಂತರಿಗಿಂತ ಲಂಚದ ಮೇಲೆ ಪಾವತಿಸುತ್ತಾರೆ. ಎಂದು ಪ್ರಾಯೋಗಿಕ ವಿಶ್ಲೇಷಣೆ ತೋರಿಸಿದೆ. ಬಡವರು ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಶಾಲೆಗಳನ್ನು ಬಳಸಲು ಸಾಧ್ಯವಿಲ್ಲ. 
ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆ ಕುರಿತಾಗಿ ಭ್ಟಚಾರವನ್ನು ತಡೆಗಟ್ಟುವ ಉದ್ದೇಶದಿಂದ ವಿಶ್ವ ಭ್ರಷ್ಟಾಚಾರ ವಿರೋಧಿ ದಿನ ಡಿಸೆಂಬರ್ 9 ರಂದು ಆಚರಿಸಲಾಗುತ್ತದೆ. ಭ್ರಷ್ಟಾಚಾರ ವಿರೋಧಿ ಆಚರಣೆ ಮತ್ತು ಆತ್ಮಾವಲೋಕನ ಅತ್ಯಂತ ಅವಶ್ಯಕವಾಗಿದೆ. 31 ಅಕ್ಟೊಬರ್‌ 2003 ರಂದು ಜನರಲ್‌ ಅಸೆಂಬ್ಲಿ ಭ್ರಷ್ಟಾಚಾರದ ವಿರುದ್ಧ ಯುನೈಟೆಡ್‌ ನೇಷನ್ಸ್‌ ಕನ್ವೆನ್ಶನ್ ಅನ್ನು ಅಂಗೀಕರಿಸಿತು  ಇದು ಡಿಸೆಂಬರ್‌ 9, 2005 ರಲ್ಲಿ ಜಾರಿಗೆ ಬಂದಿತು. ಈ  ಆಚರಣೆಯು ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಿರ್ಮೂಲನೆ ಗೊಳಿಸಿದೆ? ಬಡವರನ್ನು ಎಷ್ಟರಮಟ್ಟಿಗೆ ಭ್ರಷ್ಟಾಚಾರ ದಿಂದ ಪಾರು ಮಾಡಿದೆ ಎಂಬುವುದೇ ಜನರ ಪ್ರಶ್ನೇ?

ನೈತಿಕ ಮತ್ತು ಮಾನವೀಯತೆಯ ಆಧಾರದ ಮೇಲೆ ಈ ಸಮಾಜವನ್ನು ಪುನರ್ ರೂಪಿಸಬೇಕಿದೆ. ಧಾರ್ಮಿಕ ಆಧ್ಯಾತ್ಮಿಕ ಗುರು ಪರಂಪರೆ ಆರೋಗ್ಯ ಸಮಾಜ ಸೇವೆ ಪತ್ರಿಕೋದ್ಯಮ ಸೇರಿ ಎಲ್ಲವೂ ಬಹುತೇಕ  ಭ್ರಷ್ಟಗೊಂಡಿರುವಾಗ ಇದರ ನಿರ್ಮೂಲನೆ ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ. ಮಾನವೀಯ ಮೌಲ್ಯಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿದರೆ ಸಾಮಾನ್ಯ ಜನರಾದ ನಾವುಗಳು ಹಣ ಅಧಿಕಾರಕ್ಕಿಂತ ಮನುಷ್ಯನ ನಿಜವಾದ ಮತ್ತು ಪ್ರಮಾಣಿಕ ವ್ಯಕ್ತಿತ್ವಕ್ಕೆ ಗೌರವ ಕೊಡುವ ಸರಳ ಮನೋಭಾವ ಪ್ರದರ್ಶಿಸಿದರೆ ಭ್ರಷ್ಟಾಚಾರ ಸಾಕಷ್ಟು ಕಡಿಮೆಯಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾವು ಪಾರದರ್ಶಕತೆಯನ್ನು ಅಳವಡಿಕೊಳ್ಳಬೇಕು ಪಾರದರ್ಶಕತೆ ಎಂದರೆ ಯಾರು ಏಕೆ, ಏನು ಹೇಗೆ ಮತ್ತು ಎಷ್ಟು ಎಂಬುವುದನ್ನು ತಿಳಿದುಕೊರ್ಳಳುವುದು. ಇದರರ್ಥ ಔಪಚಾರಿಕ ಮತ್ತು ಅನೌಪಚಾರಿಕ ನಿಯಮಗಳು ಯೋಜನೆಗಳು ಪ್ರಕ್ರಿಯೆಗಳು ಮತ್ತು ಕ್ರಿಯೆಗಳ ಮೇಲೆ ಬೆಳಕು ಚೆಲ್ಲುವುದು. ಪಾರದರ್ಶಕತೆಯು ನಮಗೆ ಸಾರ್ವಜನಿಕರಿಗೆ ಸಾಮಾನ್ಯ ಒಳತಿಗಾಗಿ ಎಲ್ಲಾ ಶಕ್ತಿಯನ್ನು ಹೊಂದಲು ಸಹಾಯ ಮಾಡುತ್ತದೆ. 
ಮಾಹಿತಿಯನ್ನು ಹುಡುಕುವುದು ಮತ್ತು ಸ್ವೀಕರಿಸುವುದು ಮಾನವ ಹಕ್ಕು, ಇದು ಭ್ರಷ್ಟಾಚಾರದ ವಿರುದ್ಧ ರಕ್ಷಣೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ನಿರ್ಧಾರ ತೆಗೆದು ಕೊಳ್ಳುವವರು ಹೆಚ್ಚಿಸುತ್ತದೆ. ನಮ್ಮ ಸಮಾಜಿಕ ಭಾವನೆಗಳನ್ನು ಬದಲಾಯಿಸದಿದ್ದರೆ. ಭವಿಷ್ಯದಲ್ಲಿ ಯುವ ಸಮೂಹಕ್ಕೆ ಸಂಕಷ್ಟದ ದಿನಗಳು ಎದುರಾಗಲಿದೆ. ಹಾಗಾಗಿ ಭ್ರಷ್ಟರಹಿತ ಸಮಾಜ ಕಟ್ಟಲು ಯುವಜನತೆ ಮುಂದಾಗಬೇಕು. 

- ಅರ್ಚನ ಹೊನಲು, ಅತ್ತಿಬೆಲೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...