ಬುಧವಾರ, ಸೆಪ್ಟೆಂಬರ್ 13, 2023

ಕಲಾ ನೈಪುಣ್ಯ (ಕವಿತೆ) - ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.

ಚಿತ್ರ ಕಲಾಕಾರನ ಕಲಾ ನೈಪುಣ್ಯತೆಗೆ ನಿಬ್ಬೆರಗಾಗಬೇಕು/
ಕನ್ನಡಿ ಎದುರು ನಿಂತ ಬಾಲೆ ಅಜ್ಜಿಯಂತೆ ತೋರುತಿರಲು ಏನೆನ್ನಬೇಕು/

ಕನ್ನಡಿಯೂ ಕಲಾ ಕೌಶಲ್ಯವೇ,ಬಾಲೆ ನಿಜವೆ?
ಚಿತ್ರ ಬ್ರಹ್ಮನಿಗೆ ಅದೂ ಅಸಾಧ್ಯವೇ/

ಚಿತ್ರ ಕಲೆಯೊಳಗೇ ಅಭಿವ್ಯಕ್ತಿಸಿದ ಬದುಕಿನ ಭಿನ್ನ ಅವಸ್ಥೆಗಳ ಅನನ್ಯ ಭಾವ/
ಶೈಶವ,ಬಾಲ್ಯ,ತಾರುಣ್ಯ ಕೊನೆಗೆ ಮುಪ್ಪು  ಎಂದು ಬಿಂಬಿಸಿಹ ಚಿತ್ರ ಕಾವ್ಯ/

ಮುದುರುವುದು ತಾರುಣ್ಯ
ತಪ್ಪದು ಮುಪ್ಪು ಎಂಬ ಸತ್ಯದ ಪ್ರತಫಲನ/
ಬದುಕಿನ ಅಂತ್ಯ ಬಿಂದು ಅರಿಯದ ಪಯಣವ ಸಾಥ೯ಕ ಪಡಸಿಕೋಳ್ಳೋಣ/

ಸಾಥ೯ಕತೆಗೂ, ಸಂಯಮಕೂ,
ಉರಿದಾಟ, ಕಚ್ಚಾಟ, ಕುಹಕತನಗಳಲ್ಲಿ
ಆಯ್ಕೆಯ ಇಟ್ಟ ದೇವರೆಂಬ ಜಾಣ/
ಈ ಜನುಮದ ಕಮ೯ ಫಲಗಳು ಬಿಡದೇ ಹಿಂಬಾಲಿಸುವವು ಕಾಣ/

ಸನ್ನಡತೆ, ಸದ್ವಿಚಾರಗಳ ಆರಿಸಿಕೊಂಡು, ಮುಂಬರುವ ಜನುಮಗಳ ಚಿಂತಿಸಿರಿ/
ಲಭ್ಯವಾದ ಮಾನವ ಜನ್ಮವ ವ್ಯರ್ಥಗೊಳಿಸದಿರಿ/.

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...