ಚಿತ್ರ ಕಲಾಕಾರನ ಕಲಾ ನೈಪುಣ್ಯತೆಗೆ ನಿಬ್ಬೆರಗಾಗಬೇಕು/
ಕನ್ನಡಿ ಎದುರು ನಿಂತ ಬಾಲೆ ಅಜ್ಜಿಯಂತೆ ತೋರುತಿರಲು ಏನೆನ್ನಬೇಕು/
ಕನ್ನಡಿಯೂ ಕಲಾ ಕೌಶಲ್ಯವೇ,ಬಾಲೆ ನಿಜವೆ?
ಚಿತ್ರ ಬ್ರಹ್ಮನಿಗೆ ಅದೂ ಅಸಾಧ್ಯವೇ/
ಚಿತ್ರ ಕಲೆಯೊಳಗೇ ಅಭಿವ್ಯಕ್ತಿಸಿದ ಬದುಕಿನ ಭಿನ್ನ ಅವಸ್ಥೆಗಳ ಅನನ್ಯ ಭಾವ/
ಶೈಶವ,ಬಾಲ್ಯ,ತಾರುಣ್ಯ ಕೊನೆಗೆ ಮುಪ್ಪು ಎಂದು ಬಿಂಬಿಸಿಹ ಚಿತ್ರ ಕಾವ್ಯ/
ಮುದುರುವುದು ತಾರುಣ್ಯ
ತಪ್ಪದು ಮುಪ್ಪು ಎಂಬ ಸತ್ಯದ ಪ್ರತಫಲನ/
ಬದುಕಿನ ಅಂತ್ಯ ಬಿಂದು ಅರಿಯದ ಪಯಣವ ಸಾಥ೯ಕ ಪಡಸಿಕೋಳ್ಳೋಣ/
ಸಾಥ೯ಕತೆಗೂ, ಸಂಯಮಕೂ,
ಉರಿದಾಟ, ಕಚ್ಚಾಟ, ಕುಹಕತನಗಳಲ್ಲಿ
ಆಯ್ಕೆಯ ಇಟ್ಟ ದೇವರೆಂಬ ಜಾಣ/
ಈ ಜನುಮದ ಕಮ೯ ಫಲಗಳು ಬಿಡದೇ ಹಿಂಬಾಲಿಸುವವು ಕಾಣ/
ಸನ್ನಡತೆ, ಸದ್ವಿಚಾರಗಳ ಆರಿಸಿಕೊಂಡು, ಮುಂಬರುವ ಜನುಮಗಳ ಚಿಂತಿಸಿರಿ/
ಲಭ್ಯವಾದ ಮಾನವ ಜನ್ಮವ ವ್ಯರ್ಥಗೊಳಿಸದಿರಿ/.
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ