ಬುಧವಾರ, ಸೆಪ್ಟೆಂಬರ್ 13, 2023

ಪೀನ ನಿಮ್ನಗಳ ನಡುವೆ (ಕವಿತೆ) - ಪ್ರಭುಕುಮಾರ ಪಿ.

ಪೀನ ನಿಮ್ನಗಳ ನಡುವೆ 
ಗೋಚರ ಅಗೋಚರಗಳ 
ಅನುಭವದ ಅನುಭಾವವಿದೆ. 

ಕಣ್ಣ ಕನಸುಗಳೆಲ್ಲ 
ಬಣ್ಣದ ಬದುಕಿನ
ಕೊನೆ ಮೊದಲಿನ ನಡುವೆ
ಸುಳಿದು ಸೆಳೆಯುತ್ತಿದೆ. 

ಬದುಕಿನ ಬಯಲು 
ಬಯಲಿನ ಬದುಕು 
ಚಿತ್ತ ಚೇತನಗಳ ಒಳಗೆ
ಪುಳಕಿಸಿ ಕಲಕುತ್ತಿದೆ. 

ನೆನ್ನೆ ನಾಳೆಗಳ ನಿಮ್ನ ಪೀನಗಳ 
ಕೋನ ಮಾಪನದ ನಡುವೆ
ಬುದ್ಧಿ ಭಾವಗಳ  ವಿದ್ಯುದಾಲಿಂಗನಕೆ 
ತನು ಮನವನು ಅಣಿಗೊಳಿಸಿದೆ. 

ಕಳೆದು ಹೋಗುವ ಈ ಗಳಿಗೆ
ಸೆಳೆಯಲು ಎಂದೇ ಇರುವ ಬಯಕೆ 
ಪೀನ ನಿಮ್ನಗಳ ಸಂಗಮ ಬಿಂದುವಿಗೆ
ಸದಾ ಹಂಬಲಿಸಿದೆ.

- ಪ್ರಭುಕುಮಾರ ಪಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...