ಬುಧವಾರ, ಸೆಪ್ಟೆಂಬರ್ 13, 2023

ಹೇ ಭಗವಂತ ಒಮ್ಮೆ ಧರೆಗೆ ಬಾ (ಕವಿತೆ) - ಶ್ರೀ ಮುತ್ತು.ಯ. ವಡ್ಡರ.

ಹೇ ಭಗವಂತ ಒಮ್ಮೆ ದರೆಗೆ ಬಾರಯ್ಯ
ಬಂದು ನೀ ಅನ್ಯಾಯ ಅಕ್ರಮ ಹೋಗಲಾಡಿಸಯ್ಯ
ಪಾಪವೇ ತುಂಬಿದ ಲೋಕಕೆ ಬೇಗ ಬಾರಯ್ಯ
ಮನುಜನನ್ನು ಮನುಷ್ಯನಾಗಿ ಬದಲಾಯಿಸಬೇಕಾಗಿದೆ ಅಯ್ಯ

ದೇವರೆಂದರೆ ನೀನೇ ಭಕ್ತಿ ಎಂದರೂ ನೀನೇ
ನೀನಿಲ್ಲದೆ ಲೋಕವೆಲ್ಲ ಶೂನ್ಯ ತಾನೇ
ಜಗದ ಉದ್ದಾರಕ್ಕಾಗಿ ಭೂಲೋಕಕೆ ಬಾ ಶಿವನೇ
ನಿತ್ಯ ನಿಮ್ಮ ಪಾದವ ಪೂಜಿಸಿ ನಮಿಸುವೆ ಬಾ ದೇವನೇ

ಕಷ್ಟವ ಮರೆಮಾಚಿ ಸುಖ ನೀಡಲು ಬಾ
ದುರ್ಮಾರ್ಗವ ತೊಲಗಿಸಿ ಸನ್ಮಾರ್ಗ ತೋರಲು ಬಾ
ಪಾಪದ ಪ್ರಪಂಚದಲ್ಲಿ ಪುಣ್ಯವ ಕಲ್ಪಿಸಲು ಬಾ
ಅನ್ಯಾಯ ಮರೆಸಿ ನ್ಯಾಯ ನೀಡಲು ಬಾ

ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ಅವತರಿಸು
ಒಂಟಿಯಾದವರಿಗೆ ಜೊತೆಯಾಗಿ ನೀ ಆಗಮಿಸು
ಅನ್ನಕ್ಕಾಗಿ ಅಲೆಯುವವರಿಗೆ ಮೃಷ್ಟಾನ್ನವಾಗಿ ಕಾಣಿಸು
ಪ್ರಾರ್ಥಿಸುವ ಭಕ್ತರಿಗೆ ವರವಾಗಿ ಆಶೀರ್ವದಿಸು 

ಭಯ ಭಕ್ತಿ ಇಲ್ಲದವರಿಗೆ ಎಚ್ಚರಿಕೆಯ ಗಂಟೆ ಕೊಡು
ನಾನು ನನ್ನದೆನ್ನುವ ಅಹಂಕಾರಿಗಳಿಗೆ ಮುಕ್ತಿಕೊಡು
ಒಳಗೊಳಗೆ ಸಂಚು ಮಾಡುವ ಹಿತ ಶತ್ರುಗಳಿಗೆ ಬುದ್ಧಿ ಕೊಡು
ಕಷ್ಟಕ್ಕಾಗದ ಸಂಬಂಧಿಕರಿಗೆ ತಿಳುವಳಿಕೆ ಕೊಡು 

- ಶ್ರೀ ಮುತ್ತು.ಯ.ವಡ್ಡರ
ಶಿಕ್ಷಕರು 
ಬಾಗಲಕೋಟ
Mob-9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...