ಬುಧವಾರ, ಸೆಪ್ಟೆಂಬರ್ 13, 2023

ನೀ ದಿಟ್ಟ ಮಹಿಳೆ (ಕವಿತೆ) - ಮಂಜುಶ್ರೀ ಹೆಚ್.,ಬಳ್ಳಾರಿ.

ಒಲೆಯನ್ನು ಊದುವ ಕೈಗಳು,
ತೊಟ್ಟಿಲನ್ನು ತೂಗುವ ಕೈಗಳು,
ಊಟ ಮಾಡಿಸುವ ಕೈಗಳು,
ಪಾಲನೆಯಿಂದ ಪೋಷಣೆ ಮಾಡುವ ಕೈಗಳು,
ಜಗತ್ತನ್ನೇ ಆಳುವ ಮನಸಿದ್ದರು ಯಾರದೋ
ಬಂಧನಕ್ಕೆ ಬಂಧಿಯಾಗಿರುವ ಕೈಗಳು.

ತಲೆತಗ್ಗಿಸಿ ಮೌನವಾಗಿ ಕೂತೆ
ಮೌನವನ್ನೇ ಆಭರಣವಾಗಿಸಿಕೊಂಡು,
ನೋವನ್ನೇ ನಾಚಿಕೆಯಾಗಿಸಿಕೊಂಡು,
ಸಿದ್ದವಾಗಿರುವೆ ಮದುವೆಗೆ
ಭಾವನೆಗಳೇ ಇಲ್ಲದ ಗೊಂಬೆಯಂತೆ,
ಇನ್ನೊಬ್ಬರ ಸಂತೋಷಕ್ಕಾಗಿ.

ಮನಸಿಲ್ಲದ  ಕಗ್ಗತ್ತಲೆಯ ಕಾಡಿನಲ್ಲಿ
     ಹೋಗುತ್ತಿರುವೆ,
ಒಮ್ಮೆ ತಿರುಗಿದರೆ ನೋವಿನ ಜಟಕಾಬಂಡಿ.

ಇಷ್ಟೊಂದು ಸಹನೆಯ ಮಾತೃದೇವತೆ,
ಒಮ್ಮೆ ಮುನಿಸಿದರೆ ವಿನಾಶಕ್ಕೆ ಅಡಿಪಾಯ.

ಅಕ್ಕರೆಯ ಅಕ್ಕನಾಗಿ,
ಕಾಳಜಿಯ ಹೆಂಡತಿಯಾಗಿ,
ನಂಬಿಕೆಯ ಮಗಳಾಗಿ,
ಹಿತಬಯಸುವ ಅಮ್ಮನಾಗಿ.

ಎಲ್ಲಾರ ಮನದಲ್ಲಿ ನೆಲೆಗೊಂಡಿರುವ ಈ ಹೆಣ್ಣನ್ನು ಗೌರವಿಸಿ, ವಂದಿಸಿ, ಪಾಲಿಸಿ, ಪ್ರೀತಿಸಿ.

- ಮಂಜುಶ್ರೀ ಹೆಚ್.,ಬಳ್ಳಾರಿ.

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...