ಬುಧವಾರ, ಅಕ್ಟೋಬರ್ 25, 2023

ಬದುಕಿಬಿಡು ಹೀಗೆ (ಕವಿತೆ) - ತ್ರಿವೇಣಿ ಆರ್. ಹಾಲ್ಕರ್.

ಬದುಕಿದು ಬದುಕಿ ಬಿಡು ನೀ ಸುಮ್ಮನೆ,
ಯಾರ ಮನಸು ನೋಯಿಸದ ಹಾಗೇ,
ಯಾರಿಗೂ ಕೇಡು ಬಯಸದ ಹಾಗೇ.

ಬದುಕೆಂಬ ಸಾಗರದಲ್ಲಿ ನಾವಿಕ ನೀನು ,
ದಡವ ಸೇರದಿದ್ದರು ಮುನ್ನಡೆಯಬೇಕು,
ಬದುಕು ನಿಲ್ಲಿಸುವವರೆಗೂ ಚಲಿಸುತ್ತಿರಬೇಕು.

ಕಷ್ಟವಿರಲಿ ಸುಖವಿರಲಿ ನಗಬೇಕು,
ನಾವು ನಕ್ಕು ಇತರರನ್ನು ನಗಿಸಬೇಕು,
ನಗುವಿನೊಂದಿಗೆ ಜೀವನವ ಮುಗಿಸಬೇಕು.

- ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ, ಕಲಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ ಕಲಬುರ್ಗಿಯ ವಿದ್ಯಾರ್ಥಿನಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...