ಮಂಗಳವಾರ, ನವೆಂಬರ್ 21, 2023

ನಾನು ಕನ್ನಡದ ಕಂದ (ಕವಿತೆ) - ಹಿಮಂತರಾಜ.

ನಾನು ಕನ್ನಡದ  ಕಂದ
ಏನು ಮುನ್ನುಡಿ ಚಂದ
ಹಂಪಿ ನಾಡಿನ ಕುವರ
ಚಂದನ ವನ ಸುಂದರ||ಪ||

ಹರಿಹರನ ಪುಣ್ಯಭೂಮಿ
ರಾಘವಾಂಕ ಧನ್ಯಭೂಮಿ
ತುಂಗಭದ್ರೆಯ ಮನುಜ
ಕಾಣು ಕಾಳುಗಳ ಕಣಜ||ಚ||

ಮುತ್ತುರತ್ನ ಅರಳಿದ್ದವು
ಬಂಗಾರಬೆಳ್ಳಿ ಚೆಲ್ಲಿದ್ದವು
ಅಕ್ಕಬುಕ್ಕ ಸಾಮ್ರಾಜ್ಯವು
ಬೆಟ್ಟಗುಡ್ಡ ಅವಿಭಾಜ್ಯವು||ಚ||

ಜ್ಞಾನಪೀಠದ ಬಹುಮಾನ
ಚಾಮುಂಡಿಯ ಅಭಿಮಾನ
ಕೋಲಾರದ ಚಿನ್ನದಗಣಿ
ಕನ್ನಡನಾಡಿನಲಿ ಕಣ್ಮಣಿ||ಚ||

      - ಹಿಮಂತರಾಜ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...