ಮಂಗಳವಾರ, ನವೆಂಬರ್ 21, 2023

ನಾನು ಕನ್ನಡದ ಕಂದ (ಕವಿತೆ) - ಹಿಮಂತರಾಜ.

ನಾನು ಕನ್ನಡದ  ಕಂದ
ಏನು ಮುನ್ನುಡಿ ಚಂದ
ಹಂಪಿ ನಾಡಿನ ಕುವರ
ಚಂದನ ವನ ಸುಂದರ||ಪ||

ಹರಿಹರನ ಪುಣ್ಯಭೂಮಿ
ರಾಘವಾಂಕ ಧನ್ಯಭೂಮಿ
ತುಂಗಭದ್ರೆಯ ಮನುಜ
ಕಾಣು ಕಾಳುಗಳ ಕಣಜ||ಚ||

ಮುತ್ತುರತ್ನ ಅರಳಿದ್ದವು
ಬಂಗಾರಬೆಳ್ಳಿ ಚೆಲ್ಲಿದ್ದವು
ಅಕ್ಕಬುಕ್ಕ ಸಾಮ್ರಾಜ್ಯವು
ಬೆಟ್ಟಗುಡ್ಡ ಅವಿಭಾಜ್ಯವು||ಚ||

ಜ್ಞಾನಪೀಠದ ಬಹುಮಾನ
ಚಾಮುಂಡಿಯ ಅಭಿಮಾನ
ಕೋಲಾರದ ಚಿನ್ನದಗಣಿ
ಕನ್ನಡನಾಡಿನಲಿ ಕಣ್ಮಣಿ||ಚ||

      - ಹಿಮಂತರಾಜ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...