ನಾನು ಕನ್ನಡದ ಕಂದ
ಏನು ಮುನ್ನುಡಿ ಚಂದ
ಹಂಪಿ ನಾಡಿನ ಕುವರ
ಚಂದನ ವನ ಸುಂದರ||ಪ||
ಹರಿಹರನ ಪುಣ್ಯಭೂಮಿ
ರಾಘವಾಂಕ ಧನ್ಯಭೂಮಿ
ತುಂಗಭದ್ರೆಯ ಮನುಜ
ಕಾಣು ಕಾಳುಗಳ ಕಣಜ||ಚ||
ಮುತ್ತುರತ್ನ ಅರಳಿದ್ದವು
ಬಂಗಾರಬೆಳ್ಳಿ ಚೆಲ್ಲಿದ್ದವು
ಅಕ್ಕಬುಕ್ಕ ಸಾಮ್ರಾಜ್ಯವು
ಬೆಟ್ಟಗುಡ್ಡ ಅವಿಭಾಜ್ಯವು||ಚ||
ಜ್ಞಾನಪೀಠದ ಬಹುಮಾನ
ಚಾಮುಂಡಿಯ ಅಭಿಮಾನ
ಕೋಲಾರದ ಚಿನ್ನದಗಣಿ
ಕನ್ನಡನಾಡಿನಲಿ ಕಣ್ಮಣಿ||ಚ||
- ಹಿಮಂತರಾಜ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ