ಮಂಗಳವಾರ, ನವೆಂಬರ್ 21, 2023

ಸಡಗರಕೆ ಕುಂದಿಲ್ಲ (ಚಿತ್ರ ಕವನ) - ಕಮಲಾಭಿತನಯೆ.

ಕರಕುಶಲ ಕಲೆಯಿಂದ, 
ಮಜಬೂತು ಕಟ್ಟಿಗೆಯ ಕಂಬ ತೊಲೆಗಳಿಂದ ಅಲಂಕೃತ 
ಮನೆಯ ಮಕ್ಕಳು, ಸೊಸೆಯರು/

*ದೀಪಾವಳಿ* ಎಂದು ಸಂಭ್ರಮದಿ ಸೇರಿಹರು ಅಕ್ಕರೆಯಲಿ ಸುಳಿದಾಡಿ ನಗುವ ತುಂಬುವರು/

ಮನೆ ತುಂಬ ಇರುವ ಹಿರಿಯರು,ಮಕ್ಕಳಿಗೆ ಬಗೆ ಬಗೆಯ ಅಡುಗೆ ಮಾಡಿಹರು/

ಸಹಕಾರ -ಸೌಹಾದ೯ತೆಯಲಿ ಕೆಲಸ ಪೂರೈಸಿ,  ತುಸು ಬಿಡುವ ಕಂಡಿಹರು/

ಊಟಕ್ಕೆ ಬರಲಿರುವ ಹಿರಿಯರು,ಮಕ್ಕಳಿಗೆ ಕಾದಿಹರು/

ಕೆಲಸದ ಆಯಾಸ ಇನಿತೂ ತೋರದು, ಮೊಬೈಲ್ ಫೋಟೋದ ಹುಮ್ಮಸ್ಸು ಉಕ್ಕಿಹುದು/

ಚಂದಾಗಿ ಇಣಕಲ್ ಸೀರೆ -ತಕ್ಕ ಆಭರಣ ತೊಟ್ಟು,
ಒತ್ತಾಗಿ ಕೂತಿಹರು,ಸಂತೃಪ್ತಿಯ ನಗೆ ಬೆಳದಿಂಗಳು ಚೆಲ್ಲಿಹುದು/

ಹೆಂಗಳೆಯರೇ ಹಾಗೆ, ಹನಿ ನೀರಿಗೆ ಅರಳಿ ನಗುವ ಪ್ರಕೃತಿಯಂತೆ/

ಫೋಟೋ ಆಯಿತು;
 ಮನೆ ಮಂದಿಗೆಲ್ಲ ಉಣಲಿಕ್ಕಿ, ಉಂಡು ಮಲಗಿ ಎದ್ದರೆ ನಿಶ್ಚಿಂತೆ/

ಮನೆ ಹಿರಿಯರ ಆದರ, ಯಜಮಾನರ ಪ್ರೀತಿ ಇರಲು, ಇರುವ ಮನೆಯೇ ಅರಮನೆಯಂತೆ,
ಇರದು ಅಲ್ಲಿ ಯಾವುದೇ ಚಿಂತೆ/

 - ಕಮಲಾಭಿತನಯೆ
ಶ್ರೀಮತಿ ರೇಖಾ ನಾಡಿಗೇರ ಹುಬ್ಬಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...