ನಾನು ಈ ಥರ ಪುಸ್ತಕ ಮೊದಲಬಾರಿ ಓದುಲತಿನಿ ಈ ಬುಕ್ ಓದಲು ಕಾರಣ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಯುವಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಇದರೆ ಬಗ್ಗೆ ಇನ್ನಷ್ಟು ತಿಳಿಯಲು ಈ ಪುಸ್ತಕ ಓದುತಿದ್ದೇನೆ. ಮೊದಲು ನಾನು ಈ ಪುಸ್ತಕ ನೋಡಿದಾಗ ಇದರಲ್ಲಿ ಖಿನ್ನತೆಗೆ ಒಳಗಾದವರ ಲಕ್ಷಣಗಳು, ಕಾರಣಗಳು ಮತ್ತು ಅವರನ್ನು ಗುರುತಿಸುವುದರ ಬಗ್ಗೆ ಇರಬೌದು ಅಂತ ತಿಳಿದಿದ್ದೆ . ಹಾಗೆ ಈ ಪುಸ್ತಕ ಸುಮ್ನೆ ಓದುತ್ತಾ ಹೋದೆ ಮೊದಲು ನೋಡಿದ್ದು ಮಾನಸಿಕ ರೋಗದ 12 ಸೂತ್ರಗಳು ಓದಿದೆ ಆವಾಗ ಇವು ನನಗೆ ಮ್ಯಚ ಆಗುತ್ತೆ ಅಂತ ಇವುಗಳನ್ನ ನನ್ನ ಜೀವನದಲ್ಲಿ ನಾಬಿ ಪಾಲಿಸಬೇಕು ಅಂತ ಅನ್ಕೊಂಡೆ ಹೀಗೆ ಓದುತ್ತಾ ಹೋದಂತೆ ಕೊನೆಯಲ್ಲಿ ಆತಂಕ ಮತ್ತು ಭಯದ ಬಗ್ಗೆ ಓದುವಾಗ ನನಗೆ ಹಾಗೇನೂ ಅನಿಸಲಿಲ್ಲ ಹಾಗೆ ಓದುತ್ತಾ ಹೋದಂತೆ ಅಲ್ಲಿ ಆತಂಕ ಮತ್ತು ಭಯ ಜ್ಞಾಪಕ ಶಕ್ತಿಯ ಮೇಲೆ ಹೇಗೆ ಪ್ರಭಾವ ಬೀರಿವೆ ಮತ್ತು ಅದನ್ನು ಹೆಚ್ಚಿಸುವುದು ಹೇಗೆ ಎಂದು ಓದ ಬೇಕಾದರೆ ಮೊನ್ನೆ ನನ್ ತಮ್ಮ ನನಗೆ ಇದರ ಬಗ್ಗೆ ಕೇಳಿದ್ದ ಹಾಗೆ ನೆನಪಾಗಿ ನಾನು ಬುಕ್ ತೊಗೊಂಡು ಅವನ್ ಬಲ್ಲಿ ಹೋದ ಅವನಿಗೆ ಈ ಪುಸ್ತಕದಲ್ಲಿ ಕೊಟ್ಟಿರುವ ಜ್ಞಾಪಕ ಶಕ್ತಿ ಹೇಗೆ ಹೆಚ್ಚಿಸಬೇಕು ಎಂದು ವಿವರವಾಗಿ ತಿಳಿಸಿದೆ ಆವಾಗ ಅವನು ಒಂದು ಪ್ರಶ್ನೆ ಕೇಳಿದ ಆಗ ನಾನು ಹಿಂದೆ ಓದಿದ ಎಲ್ಲಾ ಪುಟಗಳು ನೆನಪಾದವು ಆಗ ನನಗೆ ಈ ಪುಸ್ತಕದಲ್ಲಿ ಏನಿದೆ ಎಂದು ತಿಳಿತು. ಆಗ ನಾನು ಅವನಿಗೆ ಹೇಳಿದೆ ಆತಂಕ ಮತ್ತು ಖಿನ್ನತೆ ಅಂದ್ರೆ ಏನು ಅದರಾಗ 6-7 ವಿಧಗಳಿವೆ ಎಂದು ನನಗೂ ಗೊತ್ತಿರಲಿಲ್ಲ ಆಗ ಅವನು ಕೇಳಿದ ನಂತರ ನಾನು ಓದಿದು ನೆನಪಾಯಿತು. ನಾನು ಅವುಗಳ ಬಗ್ಗೆ ಅವನಿಗೆ ಹೇಳಿದೆ ಖಿನ್ನತೆ , ಆತಂಕ ಮತ್ತು ಭಯ ಇವುಗಳ ಲಕ್ಷಣಗಳು , ಕಾರಣಗಳು ಮತ್ತು ಪರಿಹಾರ ಬಗ್ಗೆ ತಿಳಿಸಿ ಹೇಳಿದೆ. ಅವನಿಗೆ ಹೇಳಿದ ನಂತರ ನನಗೂ ಸ್ವಲ್ಪ ಕುತೂಹಲದಿಂದ ಮುಂದೆ ಓದಿದೆ ಅದರಲ್ಲಿ ಕೊನೆಯದಾಗಿ ದೇವರು ಮೈಮೇಲೆ ಬರೋದು, ದೆವ್ವ ಬರೋದು, ಮಾಟ, ಮಂತ್ರ ಮದ್ದು ಇದು ಯಾವುದೂ ಇರುವುದಿಲ್ಲ ಇದು ಒಂದು ಮಾನಸಿಕ ಒತ್ತಡದಿಂದ ಹೀಗಾಗುತ್ತದೆ ಅಂತ ತಿಳಿಯಿತು. ಇದಕ್ಕೂ ಮೊದಲು ನಾನು ಕೂಡ ದೆವ್ವ ಇರುತ್ತವೆ ಅಂತಾ ನಂಬಿದ್ದೆ. ಇಗ ಈ ಪುಸ್ತಕ ಓದಿದರಿಂದ ಇದೆಲ್ಲ ಸುಳ್ಳು ಇದು ಒಂದು ಮಾನಸಿಕ ರೋಗವಾಗಿದೆ. ನಾನು ಈ ಪುಸ್ತಕ ಓದಿ ಇಷ್ಟು ತಿಳಿದುಕೊಂಡಿದ್ದೇನೆ. ನನಗೆ ಈ ಮಾನಸಿಕ ಖಾಯಿಲೆಯ ಬಗ್ಗೆ ಇನ್ನಷ್ಟು ಓದುವ ಕುತೂಹಲ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಯುವಜನರು ಖಿನ್ನತೆಯಿಂದ ಬಳಲುತ್ತಿರುವುದರಿಂದ ಅದಕ್ಕೆ ಈ ಪುಸ್ತಕ ಎಲ್ಲಾ ಯುವಜನರು ಓದಲೇಬೇಕಿದೆ. ಧನ್ಯವಾದಗಳು ಸರ್.......
- ಮಾಣಿಕ್ ಪಾಂಚಾಳ ಕಲಬುರಗಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ