ಶುಕ್ರವಾರ, ಜನವರಿ 5, 2024

ಬೆಂಕಿ ಮತ್ತು ಹೊಗೆ (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಪಾರ್ಲಿಮೆಂಟ್ ಒಳಗೆ ಬೆಂಕಿ ಇಲ್ಲ ಹೊಗೆ ಮಾತ್ರ ಸಹಕರಿಸಿ. 

ವಿರೋಧಿ ತಲೆಯೊಳಗೆ
ಬೆಂಕಿ ಬಿದ್ದಿದೆ ಅಧಿಕಾರ ಇಲ್ಲದೆ.

ಜನರ ಹೊಟ್ಟೆ ಒಳಗೆ ಬೆಂಕಿ 
ಮಹಾಭಾರತ ಸಾಕ್ಷಿಯಾಗಿ .

ಭೂಮಿಗಾಗಿ ಸಂತತಿಗಾಗಿ ಕುಟುಂಬಕ್ಕಾಗಿ ಬೆಂಕಿ ಹಚ್ಚು ಹೊಗೆ ಹಾಕು. 

ಕರೋನಾ ಸಮಯ ಶ್ವಾಸಕೋಶದಲ್ಲಿ ಬೆಂಕಿ 
ಔಷಧಿ ಇಲ್ಲ. 

ಕಿಡ್ನಿಯಲ್ಲಿ ಬೆಂಕಿ  ತಂದಿದೆ ಕಲ್ಲು 
ನೀರು ಕುಡಿಯಿರಿ. 

ಹೊಗೆ ಜಾಸ್ತಿ ಪಾದಗಳು ತೊಡೆಗಳು ಅಲುಗಾಡುತ್ತಿವೆ. 

ಜನರ ಪ್ರತಿನಿಧಿ ಸಭೆಯಲ್ಲಿ ನಾಲಿಗೆ ಉಗುಳುತ್ತಿದೆ ಹೊಗೆ. 

ಯುವಕರ ಕೂದಲು ಬೆಳ್ಳಗಾಗಿವೆ ಹೊಗೆಯಿಂದ. 

ಬಂಡವಾಳ ಬೆಳೆಯುತ್ತಿದೆ ಕನಸುಗಳು ಕಮರಿವೆ ಉದ್ಯೋಗ ಸಿಗದೆ. 

ತುತ್ತಿನ ಚೀಲ ತುಂಬುವಂತೆ ಪಾರ್ಲಿಮೆಂಟ್ ಒಳಗೆ ಹೊಗೆ ಹಾಕಿರುವರಂತೆ. 

ಬೆಂಕಿಯಲ್ಲಿ ಬೇಯದೆ ಹೊಗೆಯಲ್ಲಿ ಉಸಿರು ಕಟ್ಟಿ ಸಾಯದೆ ಉಳಿದ ಯುವಕರು. 

ವಿಮಾನ ಉರಿದು ಕಣ್ಣುಗಳಲ್ಲಿ
ಮೂರನೇ ಕಣ್ಣು ತೆರೆದು ಹೊಗೆ. 

ಬೆನ್ನು ಮೂಳೆ ಮುರಿದ ಆಡಳಿತ 
ಯುವಕರ ಚರ್ಮ ಸುಲಿದು ನಾಯಿಪಾಡು. 

ಜೀರ್ಣ ಆಗದ ಉಚಿತ ಆಹಾರ 
ನಿರುದ್ಯೋಗ ಏನಿಲ್ಲ ವಿರೋಧಿ ಪಕ್ಷ ಮಸಲತ್ತು.

ಮದುವೆಗಳು ನಡೆಯುತ್ತಿವೆ 
ಕಷ್ಟ ಏನಿಲ್ಲ ಬಸ್ಸು ವಂದೇ ಭಾರತ ರೈಲು ತುಂಬಿ ತುಳುಕುತ್ತಿವೆ.

-ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...