ಶುಕ್ರವಾರ, ಜನವರಿ 5, 2024

ಪ್ರೀತಿಯ ಅರಂಭ(ಕವಿತೆ) - ಆದರ್ಶ್ ಪಟೇಲ್, ಚಿಕ್ಕಮಗಳೂರು.

ಆರಂಭವೇ ನಿನ್ನಿಂದ ಈ ಪ್ರೀತಿಗೆ
ನಿನ್ನ ಕಂಡೊಡನೆ ನೂರಾರು ಕನಸುಗಳ ಹೆಣೆದೆ
ಹೇಳದೆ ಬಂದ ಒಲವನು ನಾ ಹೇಗೆ ಬೇಡವೆನ್ನಲೆ 
ಕನ್ನಡಿಯ ಮುಂದೆ ನಿಂತು ಕಣ್ಣು ಹೊಡೆಯೋದನ್ನು
 ನಿನಗಾಗಿ ಕಲಿತಿರುವೇನು

ಕನಸಿನ ಕಂಗಳಿಗೂ ನಿನ್ನದೇ ಅಲೆ 
ಈ ಉಸಿರಿಗೆ ಅನಿವಾರ್ಯ ನಿನ್ನದೇ ಪ್ರದಕ್ಷಿಣೆ
ಸ್ಮರಣೆಯ ಮಾಡುವೆ ನಿನ್ನದೇ ಹೆಸರನು
ರಾಶಿ ಕನಸುಗಳ ಹೊತ್ತು ತಂದೆ ನನ್ನೆದೆಯ ಹೊಸ್ತಿಲಲ್ಲಿ

ನೀನೊಮ್ಮೆ ಕನಸುಗಳ ಬಿತ್ತಿ ಬಾ ನಾ ಪ್ರೇಮ ಲೋಕವ ಕಟ್ಟುವೆ 
ಅಲೆದಾಡುವ ಈ ಮನಸ ಮನಸಾರೆ ಆಲಂಗಿಸಿ ಸೊಗಸಾದ ಕಥೆಯ ಬರೆಯಲು ಬಾ
ಸೃಷ್ಟಿಯೇ ಒಮ್ಮೆ ದೃಷ್ಟಿಯ ತೆಗೆಯಬೇಕು ಹೀಗೆ ಜೊತೆಯಾಗಿರೋಣ ಬಾ
ಅಂತರಂಗದಲ್ಲಿ ಅಲಂಕೃತಳಾಗಿ ನಲಿಯು ಬಾ
ಈ ಪ್ರೀತಿಯೆಂಬ ಹಾಡಿಗೆ ಹೊಸ ಶೀರ್ಷಿಕೆ ನೀನಾಗು ಬಾ.

- ಆದರ್ಶ್ ಪಟೇಲ್
ಚಿಕ್ಕಮಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...