ಭಾನುವಾರ, ಫೆಬ್ರವರಿ 4, 2024

ಗೆಲ್ಲುತ್ತೇನೆ(ಕವಿತೆ) - ಬಿ ಎಂ ಮಹಂತೇಶ್.

ಹೊತ್ತು ಮೂಡುವ ಮುನ್ನ
ಎದ್ದು ರೊಟ್ಟಿ ಬೇಯಿಸಿದ,
ಎತ್ತು, ನೊಗ ಹೊತ್ತು
ನೆತ್ತಿ ಕಾಯಿಸಿದ,
ನನ್ನ ಹೆತ್ತವರಿಗಾಗಿ ಗೆಲ್ಲುತ್ತೇನೆ...

ನಿತ್ಯವೂ ಸ್ಫೂರ್ತಿ ತುಂಬುತ
ಬದುಕಿನಾದಿಯ ತುಳಿಸುತ,
ಜ್ಞಾನವ ಬಿತ್ತುತ, ಮುದ್ದು
ಮಾಡಿದ ನನ್ನ ಗುರುಗಳಿಗಾಗಿ
ಗೆಲ್ಲುತ್ತೇನೆ...

ಮುತ್ತಿನಂತ ಮಾತನಾಡುವ
ನನ್ನ ಗೆಳೆಯರಿಗಾಗಿ,
ಚುಚ್ಚಿ ಮಾತನಾಡುವ
ನಾಲ್ವರಿಗಾಗಿಯಾದರೂ
ನಾನು ಗೆಲ್ಲುತ್ತೇನೆ...

ಗೆದ್ದೇ ಗೆಲ್ಲುತ್ತೇನೆ
ಒಂದಲ್ಲ ಒಂದು ಒಂದೇ ದಿನ..
ನನ್ನದೇ ಮಾತಾಗಬೇಕು
ಎಲ್ಲರ ಬಾಯಲ್ಲಿ ಪ್ರತಿದಿನ...

-  ಬಿ ಎಂ ಮಹಾಂತೇಶ್
SAVT  ಕಾಲೇಜ್ ಕೂಡ್ಲಿಗಿ
ವಿಜಯನಗರ ಜಿಲ್ಲಾ
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...