ಬುಧವಾರ, ಜುಲೈ 24, 2024

ಪ್ರೀತಿ ಎಂದರೆ...


ಪ್ರೀತಿ ಎಂದರೆ...

ಕಣ್ ಮನಗಳ ನಡುವೆ
ಮೂಡುವ ಮೋಹ ಸೆಳೆತವಲ್ಲ,
ಪ್ರೀತಿ ಎಂದರೆ, ಭಾವ ಬೆರೆಸುವ
ಜಾತಿ ಮೀರುವ, ನಿತ್ಯ ಚಿಲುಮೆ...

ಅಂದ ಚೆಂದ, ಚಂದಮಾಮನ
ತಂದು ಕೊಡುವುದಲ್ಲ,
ಪ್ರೀತಿ ಎಂದರೆ, ನಾನೆ ನೀನು,
ನೀನೆ ನಾನು ಎನ್ನುವ ಒಲುಮೆ...

ಸಾಲೊಂದ ಗೀಚಿ ವರ್ಣಿಸಿ
ಚೆಲುವ ಬನ್ನಿಸುವುದಲ್ಲ,
ಪ್ರೀತಿ ಎಂದರೆ, ಪ್ರೀತಿ ಕವಿತೆಗೆ
ಭಾವ ಜೀವ ನೀಡುವ ಚಿಂತನೆ...

ಜಾತಿ ನೀತಿಯ ಜಗಕೆ
ಎದರಿ ಹಾರುವುದಲ್ಲ,
ಪ್ರೀತಿ ಎಂದರೆ, ಹೃದಯನಾದವ ಬೆರಸಿ,
ಜನ್ಮ ಜನ್ಮಕೂ ಜೊತೆ ಬಾಳುವ ಕಲ್ಪನೆ...

ಬಿ ಎಂ ಮಹಾಂತೇಶ್
SAVT ಕಾಲೇಜು ಕೂಡ್ಲಿಗಿ.
ವಿಜಯನಗರ ಜಿಲ್ಲಾ
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...