ಮಂಗಳವಾರ, ಆಗಸ್ಟ್ 13, 2024

ಮಸಣ...


ಮೇಲು ಕೀಳೆಂಬ ಭೇದ-ಭಾವ ಇಲ್ಲ
ನಾನು ತಾನೆಂಬ ಅಹಂಕಾರವಿಲ್ಲ

ನಾನು ನನ್ನದೆಂದು ಆಸೆ ಇಲ್ಲ
ಹಿರಿಯ ಕಿರಿಯವೆಂಬ ತಾರತಮ್ಯ ಇಲ್ಲ.

ಹೆಣ್ಣು ಗಂಡೆಂಬ ಹೋಲಿಕೆ ಇಲ್ಲ
ನಾ ಮುಂದು ತಾ ಮುಂದೆಂಬ ಹೋರಾಟವಿಲ್ಲ

ಮಹಾದಾಸೆಗಳೆಲ್ಲಾ ಮಣ್ಣಾಗಿಹುದು
ಉಸಿರ ಪಯಣ ನಿಂತಿಹುದು

ಕಾಂಚಾಣಕ್ಕಾಗಿ ಕಾದಾಡಿದವರು
ಕಾಟವಿಲ್ಲದೆ ಮಲಗಿರುವರು

ನನ್ನವರೆಂದೂ ಮೆರೆದವರು
ಸಂಬಂಧದಿ ದೂರ ಉಳಿಯುವರು

ಕಷ್ಟದಲ್ಲಿ ಬರದವರು
ಕಟ್ಟಿಗೆಲಿಟ್ಟಾಗ ಬರುವರು

ಹೊತ್ತಿಗೆ ತುತ್ತು ನೀಡದಿದ್ದರು
ಬಂದು ಬಿಕ್ಕಿ ಬಿಕ್ಕಿ ಅಳುವರು…!
- ಸದ್ದಾಂ ತಗ್ಗಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...