ಶುಕ್ರವಾರ, ಫೆಬ್ರವರಿ 21, 2025

ಕಹಿ ನೆನಪು ಮರೆಯೋಣ...

""ಕಹಿ ನೆನಪು ಮರೆಯೋಣ""

 ಎದೆಯ ಹೊಲದಿ ಬೆಳೆದ ಕಳೆಯ ಕೀಳೋಣ
 ಮನದ ಬಯಲನು ಹರವಿ ಹಸನುಗೊಳಿಸೋಣ 

ಪ್ರೀತಿ ಸ್ನೇಹ ವಿಶ್ವಾಸದ ಬೀಜ ಬಿತ್ತೋಣ
 ಮಮತೆ ವಾತ್ಸಲ್ಯದ ಹನಿಯ ಸಿಂಪಡಿಸೋಣ

 ಹೃದಯ ತೋಟದಿ ಪ್ರೀತಿ ಸುಮವರಳಿಸೋಣ
 ಮಧುರ ಬಾಂಧವ್ಯದ ಸೌಗಂಧ ಪಸರಿಸೋಣ 

ಬಾಳಲಿ ಬಂದೆರಗಿದ ಕಹಿ ನೆನಪ ಮರೆಯೋಣ
 ಎಲ್ಲರೊಳಗೊಂದಾಗಿ ಸಂತಸದಿ ಮೆರೆಯೋಣ

ತೇಲಿತೇಲಿ ಬರುವ ತಂಗಾಳಿಗೆ ಕಿವಿಯಾಗೋಣ
 ಹೊಸ ನಾಳಿನ ಮೂಡಣಕೆ ಮನವ ತೆರೆಯೋಣ 

ಕಹಿನೆನಪು ಮರೆತು ಸಿಹಿ ಘಳಿಗೆಯ ಸ್ವಾಗತಿಸೋಣ
 ಬಾಳ ಹಾದಿಯಲ್ಲಿ ಮಾಸದ ಹೆಜ್ಜೆ ಗುರುತು ಉಳಿಸೋಣ

 ನಾಲ್ಕು ದಿನದ ಪಯಣದಿ ನಗುನಗುತ ಸಾಗೋಣ
 ದೇವನಿತ್ತ ಬದುಕಲಿ ಹಮ್ಮುಬಿಮ್ಮು ತೊರೆಯೋಣ

 ಕಹಿನೆನಪ ನೆನೆನೆನೆದು ಮನವ ರಾಡಿಯಾಗಿಸದಿರೋಣ
 ಸಿಹಿನಾಳೆಗಳಿಗೆ ಶುಭ ಕೋರುತ್ತಾ ಮನಕೆ ತೋರಣ ಕಟ್ಟೋಣ 

 ಮಧುಮಾಲತಿ ರುದ್ರೇಶ್ ಬೇಲೂರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...