ಶುಕ್ರವಾರ, ಫೆಬ್ರವರಿ 21, 2025

ಕಹಿ ನೆನಪು ಮರೆಯೋಣ...

""ಕಹಿ ನೆನಪು ಮರೆಯೋಣ""

 ಎದೆಯ ಹೊಲದಿ ಬೆಳೆದ ಕಳೆಯ ಕೀಳೋಣ
 ಮನದ ಬಯಲನು ಹರವಿ ಹಸನುಗೊಳಿಸೋಣ 

ಪ್ರೀತಿ ಸ್ನೇಹ ವಿಶ್ವಾಸದ ಬೀಜ ಬಿತ್ತೋಣ
 ಮಮತೆ ವಾತ್ಸಲ್ಯದ ಹನಿಯ ಸಿಂಪಡಿಸೋಣ

 ಹೃದಯ ತೋಟದಿ ಪ್ರೀತಿ ಸುಮವರಳಿಸೋಣ
 ಮಧುರ ಬಾಂಧವ್ಯದ ಸೌಗಂಧ ಪಸರಿಸೋಣ 

ಬಾಳಲಿ ಬಂದೆರಗಿದ ಕಹಿ ನೆನಪ ಮರೆಯೋಣ
 ಎಲ್ಲರೊಳಗೊಂದಾಗಿ ಸಂತಸದಿ ಮೆರೆಯೋಣ

ತೇಲಿತೇಲಿ ಬರುವ ತಂಗಾಳಿಗೆ ಕಿವಿಯಾಗೋಣ
 ಹೊಸ ನಾಳಿನ ಮೂಡಣಕೆ ಮನವ ತೆರೆಯೋಣ 

ಕಹಿನೆನಪು ಮರೆತು ಸಿಹಿ ಘಳಿಗೆಯ ಸ್ವಾಗತಿಸೋಣ
 ಬಾಳ ಹಾದಿಯಲ್ಲಿ ಮಾಸದ ಹೆಜ್ಜೆ ಗುರುತು ಉಳಿಸೋಣ

 ನಾಲ್ಕು ದಿನದ ಪಯಣದಿ ನಗುನಗುತ ಸಾಗೋಣ
 ದೇವನಿತ್ತ ಬದುಕಲಿ ಹಮ್ಮುಬಿಮ್ಮು ತೊರೆಯೋಣ

 ಕಹಿನೆನಪ ನೆನೆನೆನೆದು ಮನವ ರಾಡಿಯಾಗಿಸದಿರೋಣ
 ಸಿಹಿನಾಳೆಗಳಿಗೆ ಶುಭ ಕೋರುತ್ತಾ ಮನಕೆ ತೋರಣ ಕಟ್ಟೋಣ 

 ಮಧುಮಾಲತಿ ರುದ್ರೇಶ್ ಬೇಲೂರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...