ಬುಧವಾರ, ಫೆಬ್ರವರಿ 19, 2025

ಮುನಿಸೇತಕೆ ಮನವೇ ...

ಮುನಿಸೇತಕೆ ಮನವೇ..


ಬಾಳ ಪಯಣದಲಿ ಜಗಳವು ಉಚಿತವೆ
ಸಾಗೋಣ ಹೊಂದಿಕೊಂಡು ಪ್ರೀತಿ ಖಚಿತವು

ಮುನಿದು ಕೂತರೆ ಹೇಗೆ ಅಷ್ಟು ದೂರ
ಮತ್ತಷ್ಟು ಆಗುವುದು ಮನವು ಭಾರ

ತಪ್ಪುಗಳಾಗಿವೆ ತಿದ್ದೋಣ ತಿಳಿಯಾಗಿ
ತಿಳಿನೀರ ಕೊಳದಲ್ಲಿ ಹಂಸಗಳಂತೆ 

ಮುನಿದು ಮಾತು ಮೌನವಾದ ಮೇಲೆ
ಅನಿಸುತ್ತಿದೆ ಎಲ್ಲವೂ ಖಾಲಿ ಭೂಮಿ ಮೇಲೆ

ಮಡದಿ ಮಾಡಿಕೊಳ್ಳೊಣ ಹೊಂದಾಣಿಕೆ
ಸಮಾಜ ಹಾಕದಂಗೆ ನಮ್ಮಗಳಿಗೆ ಕುಣಿಕೆ

ಪ್ರತಿಕ್ಷಣವೂ ನೀನು ಜೊತೆಗಿದ್ದರೆ ಸಾಕು
ಮಧುವ ತುಂಬಿದಂತಿಹುದು ನಮ್ಮಿ ಬದುಕು
ಶಿವಾ ಮದಭಾoವಿ
ಗೋಕಾಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...