ಬುಧವಾರ, ಫೆಬ್ರವರಿ 19, 2025

ಮುನಿಸೇತಕೆ ಮನವೇ ...

ಮುನಿಸೇತಕೆ ಮನವೇ..


ಬಾಳ ಪಯಣದಲಿ ಜಗಳವು ಉಚಿತವೆ
ಸಾಗೋಣ ಹೊಂದಿಕೊಂಡು ಪ್ರೀತಿ ಖಚಿತವು

ಮುನಿದು ಕೂತರೆ ಹೇಗೆ ಅಷ್ಟು ದೂರ
ಮತ್ತಷ್ಟು ಆಗುವುದು ಮನವು ಭಾರ

ತಪ್ಪುಗಳಾಗಿವೆ ತಿದ್ದೋಣ ತಿಳಿಯಾಗಿ
ತಿಳಿನೀರ ಕೊಳದಲ್ಲಿ ಹಂಸಗಳಂತೆ 

ಮುನಿದು ಮಾತು ಮೌನವಾದ ಮೇಲೆ
ಅನಿಸುತ್ತಿದೆ ಎಲ್ಲವೂ ಖಾಲಿ ಭೂಮಿ ಮೇಲೆ

ಮಡದಿ ಮಾಡಿಕೊಳ್ಳೊಣ ಹೊಂದಾಣಿಕೆ
ಸಮಾಜ ಹಾಕದಂಗೆ ನಮ್ಮಗಳಿಗೆ ಕುಣಿಕೆ

ಪ್ರತಿಕ್ಷಣವೂ ನೀನು ಜೊತೆಗಿದ್ದರೆ ಸಾಕು
ಮಧುವ ತುಂಬಿದಂತಿಹುದು ನಮ್ಮಿ ಬದುಕು
ಶಿವಾ ಮದಭಾoವಿ
ಗೋಕಾಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...