ಭಾನುವಾರ, ಮಾರ್ಚ್ 30, 2025

ದಾರಿದೀಪ...

""ದಾರಿದೀಪ ""

ಹಿಡಿಯಬೇಕಿದೆ ಕನಸ ದಾರಿಗೆ ದೀಪವನು
 ತೆರೆಯಬೇಕಿದೆ ಮನಸಿನ ಕದವನು 

ತಮ ಕವಿದಮನವದು ಕಗ್ಗತ್ತಲೆಯ ಕಾಡು
 ಭರವಸೆಯ ದೀಪ ಹಿಡಿದು ಹುಡುಕೋಣ ಜಾಡು

 ಬಾಳಹಾದಿಯಲಿಹುದು ಏರುಪೇರುಗಳು ಹಲವು
 ಆತ್ಮಸ್ಥೈರ್ಯದಿಂದ ನಡೆದರೆ ಖಚಿತ ಗೆಲುವು 

ಒಂಟಿ ಪಯಣಿಗನೆಂದು ಕೊರಗದಿರು ಬಾಳಲಿ
 ಇರುವರು ಸಾವಿರಾರು ನಿನ್ನಂತೆ ಜಗದಲಿ

 ದೃಢಸಂಕಲ್ಪವೆಂಬ ಹಣತೆಯ ಹಚ್ಚು ನೀನು 
ಎರೆಯುತಿರು ಛಲ ನಂಬಿಕೆಗಳೆಂಬ ತೈಲವನು

 ಬಿಡದೆ ಸಾಗುತಿರು ಆತ್ಮಜ್ಯೋತಿ ಬೆಳಗುತಾ
 ಕನಸು ನನಸು ಮಾಡುವೆಡೆಗೆ ಚಿತ್ತ ಹರಿಸುತ
 ಮಧುಮಾಲತಿ ರುದ್ರೇಶ್ ಬೇಲೂರು
💐💐💐🙏🏻🙏🏻

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...