ಭಾನುವಾರ, ಮಾರ್ಚ್ 30, 2025

ಯುಗಾದಿ...

ಕವನ
         ಯುಗಾದಿ
ಬಂತೋ.. ಬಂತೋ.. ಯುಗಾದಿ ಬಂತೋ.. 
ತಂತೋ.. ತಂತೋ.. ಸಡಗರ ತಂತೋ.. 
ಸಿರಿ ತಂದಿತಪ್ಪ ಈ ಯುಗಾದಿ ಹಬ್ಬ 
ಸಂತಸದ ರೂಪ ಈ ಯುಗಾದಿ ಹಬ್ಬ 
ಮನೆಯ ಅಂಗಳದಿ ಬಣ್ಣದ ರಂಗೋಲಿ 
ಮನೆಯ ಬಾಗಿಲು ಮಾವಿನ ತೋರಣ 
ಊರ ತುಂಬೇಲ್ಲಾ ಹೊಸತು ನೋಡಾ 
ನಾಡಿನ ಜನದ ಹಿಗ್ಗು ನೋಡಾ 
ಹಬ್ಬದ ಸಿರಿಗೆ ತುಪ್ಪದ ಘಮ ಘಮ 
ಹಸಿರಿನ ಗರಿಗೆ ಸಂಭ್ರಮದ ಸಮ ಸಮ 
ಹರಿಯುವ ನೀರಲ್ಲಿ ತಲೆ ಎಣ್ಣೆ ಸ್ನಾನ 
ನಾರಿಯರ ಮುಡಿ ತುಂಬ ಮಲ್ಲಿಗೆ 
ನಾಡ ತುಂಬಾ ಸಂತಸ 
ಎಲ್ಲೆಲ್ಲೂ ಹಬ್ಬದ ಸಡಗರ 
ಸಿಹಿಯಾಗಿರೋ ಮನಸ್ಸಿಗೆ ಬೇವು ಬೆರಸಿ 
ಹೋಳಿಗೆ ತಿಂದು ಬಾಳಿಗೆ ಸಿಹಿ ಬೆರಸಿ...

    
- ವಿ.ಎಂ.ಎಸ್.ಗೋಪಿ ✍️
       ಲೇಖಕರು, ಸಾಹಿತಿಗಳು
             ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...