ಗುರುವಾರ, ಏಪ್ರಿಲ್ 3, 2025

ಜೀವನ...

ಹುಟ್ಟು - ಸಾವು
ನೋವು - ನಲಿವು
ಸೋಲು - ಗೆಲುವು
ಸೂರ್ಯ - ಚಂದಿರ 
ಗಾಳಿ - ಬೆಳಕು
ಇವು ಯಾವುದನ್ನ ಮನುಷ್ಯ
ಸೃಷ್ಟಿಸಿಲ್ಲ ಭಗವಂತನೇ ಸ್ವತಃ ಸೃಷ್ಟಿಸಿರುವನು ...
ಮನುಷ್ಯ ಎಂದ ಮೇಲೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡು
ಮಾನವನಾಗಿ ಬೆಳೆಯಬೇಕೆ ವಿನಃ
ಮಾನವೀಯತೆ ಕೊಂದು ಕ್ರೂರವಾಗಿ 
ಪ್ರಾಣಿಯಂತೆ ಬದುಕಬಾರದು..
ಎಲ್ಲವನ್ನ ಪಡೆಯಬೇಕು ನಾನೊಬ್ಬನೇ 
ಅನುಭವಿಸಬೇಕು ಎಂಬ ಮಹತ್ವ ಆಸೆಯನ್ನ ಹೊಂದಿಕೊಂಡು ಹೋಗುತ್ತಿರುವ ಮನುಷ್ಯ
ತನ್ನ ಬದುಕಿನ ದಿನಗಳ ಆಯಸನ್ನ ಅವನು ಇಂದಿಗೂ ಹುಡುಕಲಾರ 
ಇಲ್ಲಿ ಮೊದಲೇ ಯಾರಿಗೇ 
ಯಾವುದು ಸಿಗಬೇಕು ಎನುವುದನ್ನ
ಅವನೇ ನಿಶ್ಚಯ ಮಾಡಿಯೇ ಬಿಟ್ಟಿರುತ್ತಾನೆ...
ಬದುಕು ಮೂರು ದಿನದ ಸಂತೆ
ಬದುಕಿನಲ್ಲಿ ಸುತ್ತಡಬೇಕು
ಇರುವ ಸಮಯದಲ್ಲಿ ನಾವಂತೆ
ಇರೋದೇ ಒಂದೇ ಜನ್ಮ 
ಎಲ್ಲರೂ ಅವನಲ್ಲಿಗೆ ಸೇರುವೆವು 
ಒಂದಲ್ಲ ಒಂದು ದಿನ 
ನಮ್ಮ ಬದುಕನ್ನ ಪ್ರೀತಿಸೋಣ 
ಗುರು ಹಿರಿಯರನ್ನ ಗೌರವಿಸೋಣ...


          ಕಾರ್ತಿಕ್...✍️
       ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...