ಭಾನುವಾರ, ಏಪ್ರಿಲ್ 20, 2025

ಶಾಲಾ - ಕಾಲೇಜು ಜೀವನ...

ಶಾಲಾ-ಕಾಲೇಜು ಜೀವನ

ಶಾಲಾ-ಕಾಲೇಜಿನಲ್ಲಿ ನಾವೆಲ್ಲರೂ ಅಪರಿಚಿತರು
ಮರೆಯಲಾಗದ ಬಾಂಧವರು
ಅಂದು ಅನಿಸಿತು ಯಾರು ನಮ್ಮವರಲ್ಲ
ಇಂದು ಅರಿವಾಯಿತು ನಾ 
ಕಳೆದುಕೊಂಡಿದ್ದು ಸ್ವಾತಿ ಮುತ್ತುಗಳು ಅಂತ

ಎಲ್ಲಿಂದಲೋ ಬಂದು 
ಒಂದೆಡೆ ಸೇರಿದೇವು
ಕೋಪ-ತಾಪ ಪ್ರೀತಿ ಕಾಳಜಿ
ಬಾಯಿ ಮಾತಿನ ಜಗಳ
ಬೆವರಿಳಿಸಿದ ನಿತ್ಯದ ತರಗತಿಗಳು

ಅನ್ನ-ಸಾರು, ಹೊಂ ವರ್ಕ
ನಿದ್ದೆಗೆಡಿಸುವ ಪರೀಕ್ಷೆಗಳು
ಸ್ನೇಹಿತರ ಸವಿ ಸವಿ ನೆನಪುಗಳು
ಮರೆಯಲಾಗದ ಅನುಬಂಧ 

ಸ್ನೇಹ ಒಂದು ಸುಂದರ ಕವನ
ಬರೆದರೂ ಮುಗಿಯದ ಕಥನ
ಮರೆತರೂ ಮರೆಯಲಾಗದ ಸಂದನ
ಬಿಟ್ಟರು ಬಿಡಲಾಗದ ಗೆಳೆತನ

ಶಿಕ್ಷಣ ಬೆಳಗಲಿ 
ನಮ್ಮೆಲ್ಲರ ಬಾಳಿನ ಬೆಳಕು ಅಳಿಯದಿರಲಿ 
ಸಹನೆಯು ಮುನ್ನೆಡೆಯಲಿ 
ಜೀವನ ಸ್ನೇಹಿತೆಯ ಆಶಯ ಇದಾಗಲಿ

ಕಾಶಿಬಾಯಿ ಸಿ ಗುತ್ತೇದಾರ 
ಕಲಬುರಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...