ಬುಧವಾರ, ಜೂನ್ 25, 2025

ಸೈನಿಕರೇ ನಿಮಗಿದೋ ನಮನ (ಕವಿತೆ) - ಸುನಂದಾ ಪುರಾಣಿಕ.

ಪ್ರತಿದಿನ ಶಾಂತಿಯುತ ಜೀವನ ನಡೆಸಲು 
ಕಾರಣ ನಮ್ಮೀ ಸೈನಿಕರು
ದೇಶದ ಗಡಿಯನು ಕಾಯುವ ಯೋಧರು
ಅವರೇ ನಮ್ಮಯ ದೇವರು|

ಹೆತ್ತವರ ಮಡದಿ ಮಕ್ಕಳ ತೊರೆದು 
ದೇಶವೇ ನಮ್ಮ ಮನೆಯೆನ್ನುವರು
ಮಳೆ ಬಿಸಿಲು ಚಳಿಗಾಳಿಗೆ ಹೆದರದೆ
ದೇಶ ರಕ್ಷಣೆ ಮಾಡುವರು|

ದೇಶವ ಪ್ರೀತಿಸುವ ನಿಜ ದೇಶಭಕ್ತರು
ಶಿಸ್ತುಬದ್ಧ ಜೀವನ ನಡೆಸುವರು
ಲಕ್ಷಾಂತರ ಜೀವ ರಕ್ಷಿಸಲು ತಮ್ಮಯ
ಪ್ರಾಣ ತ್ಯಾಗವ ಮಾಡುವರು|

ಗಡಿಯಲ್ಲಿನ ಗುಂಡಿನ ಸದ್ದಿಗೆ ಹೆದರದೆ 
ನೀಡುವರು ಅದಕೆ ಪ್ರತ್ಯುತ್ತರ 
ಗುಂಡಿಗೆಯಲಿ ರೋಷ ತುಂಬಿಕೊಂಡು 
ಶತ್ರುಗಳ ಎದೆಸೀಳುವ ಕಾತುರ|

ಪ್ರತಿ ಉಸಿರಲಿ ಇರುವುದು ದೇಶಸೇವೆ 
ತಾಯ್ನಾಡು ಸವ೯ ಶ್ರೇಷ್ಠ 
ದೇಶವೇ ಅವರಿಗೆ ಎಲ್ಲಕ್ಕಿಂತ ಮಿಗಿಲು
ಸಹಿಸುವರು ಬಂದ ಸಂಕಷ್ಟ|

ಸೈನಿಕರ ಬದುಕು ಮುಳ್ಳಿನ ಹಾಸಿಗೆ 
ಕಠಿಣ ಸವಾಲಿನ ಜೀವನ
ರಕ್ತದಿ ದೇಶದ ಭವಿಷ್ಯ ಬರೆಯುವರು
ಸಲ್ಲಿಸೋಣ ಅವರಿಗೆ ನಮನ||

   - ಸುನಂದಾ ಪುರಾಣಿಕ, ಹಳಿಯಾಳ.ಉತ್ತರ ಕನ್ನಡ.

4 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...