ಶನಿವಾರ, ಆಗಸ್ಟ್ 16, 2025

ದೇಶಭಕ್ತಿಯ ಹಣತೆ...

"ದೇಶಭಕ್ತಿಯ ಹಣತೆ""

 ಭಾರತದ ನೆಲವಿದು ಎಷ್ಟು ಸುಂದರ 
ಜನ್ಮ ಭೂಮಿ ನಮ್ಮದಿದು ಭವ್ಯ ಮಂದಿರ 

ಜನ್ಮಿಸಿದ ನಾವುಗಳೆ ಪುಣ್ಯವಂತರು 
ಭಾರತಾಂಬೆ ಮಡಿಲಿನ ಕೀರ್ತಿವಂತರು

 ದಾಸ್ಯದ ಸಂಕೋಲೆಯಲಿ ಬಂಧಿಯಾಗಲು ಮಾತೆ
 ಹೊತ್ತಿತು ಎಲ್ಲೆಲ್ಲೂ ದೇಶಭಕ್ತಿಯ ಹಣತೆ 

ತಾಯ್ನೆಲದ ರಕ್ಷಣೆಗೆ ಹರಿಯಿತು ನೆತ್ತರು
 ಪ್ರತಿ ಹನಿಯದು ಜೀವ ಪಡೆಯಿತು ಸಾವಿರಾರು

 ಮೊಳಗಿತು ಹೋರಾಟದ ಕಹಳೆ ಮೂಲೆ ಮೂಲೆಯಲಿ
 ಬೆಳಗಿತು ಸಂಗ್ರಾಮದ ಜ್ಯೋತಿ ಮನೆ ಮನೆಯಲಿ

 ಕೇಸರಿ ಬಿಳಿ ಹಸಿರದು ತ್ರಿವರ್ಣ ಧ್ವಜವಾಯಿತು 
ಭಾರತಾಂಬೆ ಘನತೆಗೆ ರಕ್ಷಾ ಕವಚವಾಯಿತು 

ಸಾವಿರಾರು ತ್ಯಾಗ ಬಲಿದಾನಗಳ ಅರ್ಪಣೆ 
ಬಂಧ ಮುಕ್ತಿಯಾದ ತಾಯಿಗೆ ಗೌರವ ಸಮರ್ಪಣೆ

 ಬನ್ನಿ ಐಕ್ಯತೆಯ ಮಂತ್ರ ಜಪಿಸೋಣ 
ತಾಯ್ನೆಲವಿದು ನಮ್ಮದೆಂದು ಕೂಗಿ ಸಾರೋಣ

 
ಮಧುಮಾಲತಿ ರುದ್ರೇಶ್ ಬೇಲೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...