ಮಾವು ತಿಂದವರಿಗೆ ಗೊತ್ತು ರುಚಿ
ಬೆಳೆಯವಾಗಲೇ ಕಣ್ಣಿಡುವರು
ಬೇರೆಯವರ ದೃಷ್ಟಿ ಬೀಳದಿರಲೆಂದು ಬಚ್ಚಿಡುವರು
ಮಾಗಿದಷ್ಟು ರುಚಿ ಎಂದು ಬೀಗುವರು ಮಾಗಿತೆಂದರೆ ಕಣ್ಣಲ್ಲಿ ಕುಕ್ಕುವರು ಬಾಯಲ್ಲಿ ನೀರು ಸುರಿಸುವರು ಯಾವಾಗ ತಿನ್ನುವೇನು ಎಂದು ಮನದಲ್ಲಿ ಮೆಲುವರು ಪ್ರಕೃತಿಯ ಕಸುವ ಉಂಡು ಮೈದುಂಬಿ ಹೊಂಬಣ್ಣ ತಿರುಗಿದರೆ ಕಿತ್ತುಕೊಳ್ಳುವರು ಹೊಂಬಣ್ಣದ ತೊಗಲ ಎಳೆ ಎಳೆಯಾಗಿ ಬಿಚ್ಚಿ ಆಸೆಯ ತೀರಿಸಿಕೊಳ್ಳುವರು
ಹಣ್ಣು ತಿನ್ನುವ ಭರದಲ್ಲಿ ಒಡಲ ವಾಟೆಯ ಗೀರುವರು
ಗೀರಿ ಗೀರಿ ರಸವ ಸುರಿಸುವರು
ವಾಟೆಯ ಮೇಲೆ ಮೂಡಿದ ಗೀರಿನ ಕಲೆಯ ಮೇಲೆ ಸಾಧಿಸಿದೆನೆಂದು ಬೀಗುವರು
ರಸವ ಹೀರಿದ ನಂತರ ಕಸವೆಂದು ಬೀಸಾಕುವರು
ಕಸದಲ್ಲಿ ಕಣ್ಣೀರ ಹರಿಸಿ ಕೂಗುತಿದೆ ಒಡಲ ಜೀವ
ಹಣ್ಣೊಲ್ಲೋ ಮಾರಾಯ ನಾ ಹೆಣ್ಣು ಎಂದು.
ಶ್ರೀಮತಿ ಮಹಾದೇವಿ ಗೋಗೇರಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ