ಶನಿವಾರ, ಜೂನ್ 26, 2021

ಕರೋನವೆಂಬ ಕಾರ್ಮೋಡ (ಕರೋನಾ ಜಾಗೃತಿ ಕತೆ) - ಭಾಗ್ಯಲಕ್ಷ್ಮೀ ಎಂ.

ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ ; ಬೆಂಗಳೂರು ಇವರ ಜಂಟಿ                      ಸಹಯೋಗದ ಕಥಾ ಸ್ಪರ್ಧೆಗೆ ರಚಿಸಲಾದ ಕಥೆ.


ವಿಷಯ: *ಕೋವಿಡ್- ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತು ಜಾಗೃತಿ                  

ಈ ಕತೆ ಕರುನಾಡು ಕಥಾ ಸ್ಪರ್ಧೆ ಯಲ್ಲಿ ತೃತೀಯ ಬಹುಮಾನವನ್ನು ಪಡೆದಿರುತ್ತೆ.
                             

ಶಿರ್ಷಿಕೆ: ಕೊರೊನಾವೆಂಬ ಕಾರ್ಮೋಡ

2020 ಇದೊಂಥರಾ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ ವರ್ಷ. ಜೊತೆಗೆ ಈ ಒಂದು ಪೀಳಿಗೆಯವರು ಜೀವನವೀಡಿ ಮರೆಯಲಾಗದ ವರ್ಷ. ಅದಕ್ಕೆಲ್ಲಾ ಕಾರಣ ಈ ಕೊರೊನಾ.ಚೀನಾದ ವೂಹಾನ್ ನಗರದಲ್ಲಿ ಹುಟ್ಟಿದ ಈ ಭೀಕರ ಖಾಯಿಲೆ ಪ್ರಸ್ತುತ ಜಗತ್ತಿನ ಎಲ್ಲಾ ಎಲ್ಲೆಗಳನ್ನು ಆವರಿಸಿಬಿಟ್ಟಿದೆ. ಇದರಿಂದ ನಮ್ಮ ಜೀವನದಲ್ಲಿ ಬಹಳ ಬದಲಾವಣೆಯಾಗಿರುವುದು ಸುಳ್ಳಲ್ಲ.. ಆದರೆ ಈ ಬದಲಾವಣೆಯಿಂದಾಗಿ ನಾವು ಹೊಸ ಜೀವನ ಪದ್ಥತಿಗೆ ಹೊಂದಿಕೊಳ್ಳದೆ ಬೇರೆ ದಾರಿ ಇಲ್ಲ ಅನ್ನುವಂತಹ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿದೆ ಈ ಕೊರೊನಾ ಮಹಾಮಾರಿ. 

ನಾನೊಬ್ಬಳು ಕಾಲೇಜಿನ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕಾಗಿ ಹಾಸ್ಟೇಲ್ನಲ್ಲಿ ತಂಗಿದ್ದೆ ,  ಕೊರೊನಾ ಭಾರತದ್ಯಂತ ಪ್ರಾರಂಭವಾಯಿತು . ಪ್ರಮುಖ ಪ್ರಕಟಣೆ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ವಾರಗಳ ಕಾಲ‌ ಲಾಕ್ ಡೌನ್ ವಿಧಿಸಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತು. ಇದರಿಂದಾಗಿ ನಮ್ಮ ಶೈಕ್ಷಣಿಕ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಯಿತು ಹಾಗಾಗಿ ನಾನು ಮತ್ತು ನನ್ನ ಗೆಳತಿಯರು ಈ ಕೊರೊನಾಗೆ ಶಾಪ ಹಾಕುತಾ ಮನೆಯ ಹಾದಿ ಹಿಡಿದೆವು.  ಹೋಗುವಾಗ ತಿಳಿಯದ ಒಂದು ಆತಂಕ! ಆದರೂ ಈ ಕೊರೊನಾ ನನ್ನ ಹಿಂಬಾಲಿಸಿಕೊಂಡು ಬರುವುದಿಲ್ಲವೆಂದು  ರೈಲಿನಲ್ಲಿ 50 ಕಿ.ಮೀ ನಿಂತುಕೊಂಡೆ ಊರಿಗೆ ಸೇರಿ  ಬದುಕಿದೆ ಎಂದು ನನ್ನ ಪುಟ್ಟ ಮನೆಯನ್ನು ಸೇರಿಕೊಂಡೆ.ಮನೆಗೆ ಬರುವಾಗ ನನಗೆ ಯಾವ ಜ್ವರವು ಇರಲಿಲ್ಲ ಹಾಗಾಗಿ ನಾನು ಆರೋಗ್ಯವಾಗಿದ್ದೆನೆ ಅಂದುಕೊಂಡೆ. ಮನೆಗೆ ಬಂದರೆ ನನಗೆ ಸಿಗುವ ಆತಿಥ್ಯ ಹಾಗೂ ಊರು  ಕೇರಿ ಎಲ್ಲ ನೆನಸಿಕೊಂಡೆ ಮನದಲ್ಲಿಯೇ ಖುಷಿಯಾಗಿತ್ತು. ಆದರೆ ಏನು ಮಾಡೊದು ಈ ಕೊರೊನಾ ಪರಿಣಾಮದಿಂದ ಯಾರು ಬದಲಾಗಿದ್ದರೊ ಇಲ್ಲವೊ ನಮ್ಮಮ್ಮ ಪೂರ್ತಿಯಾಗಿ ಬದಲಾಗಿದ್ದಳು. ನಮ್ಮಮ್ಮ ಕೊರೊನಾ ಬಂದಾಗಿನಿಂದ ನ್ಯೂಸ್ ಚಾನಲ್ ಬಿಟ್ಟು ಬೇರೆ ನೊಡತ್ತಾ ಇರಲಿಲ್ಲ ಇದರಿಂದ ತುಂಬಾ ಹೆದರಿದ್ದಳು. ಅವರಿಗೆ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತೆ ಆದರೆ ಇದು ತಪ್ಪು ಅಂತ ಹೇಳುವಂತಿಲ್ಲ ಆದರೆ ಈ ಸಾಮಾಜಿಕ ಮಾಧ್ಯಮಗಳು ಕೊರೊನಾ ಬಂದರೆ ಅವರ ಜೀವನ ಮುಗಿತು ಸಾವು ಖಚಿತ ಅಲ್ಲಿ ಅಷ್ಟು ಜನ ಸಾವನ್ನಪ್ಪಿದ್ದಾರೆ ಇಲ್ಲಿ ಅಷ್ಟು ಕೇಸ್ಗಳು ಎಂಬೆಲ್ಲಾ ಸುದ್ಧಿಗಳು, ಜನರನ್ನು ಆತಂಕಕ್ಕೆ ಗುರಿಮಾಡುತ್ತೆ  ಅನ್ನುವ ಪ್ರಜ್ಞೆ ಇರುವುದಿಲ್ಲ ಅಂತಹದ್ದೇ ಆತಂಕ ನಮ್ಮಮ್ಮನಲ್ಲಿ ಸಹ ಇತ್ತು ಹಾಗಾಗಿ ಮನೆಗೆ ಬಂದ ಕೂಡಲೇ ನಮ್ಮ ಅಣ್ಣನ ಮಗನನ್ನು ಮುದ್ದಿಸಬೇಕು ಅನ್ನುವ ಆಸೆ ಆದರೆ ಅಮ್ಮ ಅದಕ್ಕೂ ಬಿಡಲಿಲ್ಲ ನಿನು ಯಾರನ್ನು ಮಾತಾಡಿಸೊದು ಬೇಡ ಮೊದಲು ಹೋಗೆ ಸ್ನಾನ ಮುಗಿಸಿ ಬಾ ಅಂತ ಹೊಸ ಟವಲ್ ಕೊಟ್ಟಳು…ನಾನಾಗ ಅಂದೆ ನಾನಗೇನು ಕೊರೊನಾ ಬಂದಿಲ್ಲ ಮಾರಾಯ್ತಿ  ಅದಕ್ಕೆ ಅಮ್ಮನ ಉತ್ತರ ಟಿವಿ ನೋಡು ಗೊತ್ತಾಗುತ್ತೆ ನಿಮ್ ಅಂತವರಿಗೆ ನಾವು ಹೇಳೊದು ತಮಾಷೆಯಾಗಿದೆ. ಕೊರೊನಾ ಅಷ್ಷು ಅಸಢ್ಯದ ವಿಷಯವಲ್ಲ ನಾವು‌ ನಮ್ಮ ಮುಂಜಾಗ್ರತೆಯಲ್ಲಿ ಇರಬೇಕು ಗೊತ್ತಾಯ್ತ ಹಾಗೆ  ಮಾಸ್ಕ್( ಮುಖಕವಚ) ಅವಾಗವಾಗ ಸ್ಯಾನಿಟೇಸರ್ ಬಳಸಬೇಕು ಹೊರಗಡೆ ಅನಗತ್ಯವಾಗಿ ತಿರಗಾಡಬೇಡ  ಎಂಬ ಸೂಚನೆಗಳನ್ನು ಸಹ ಕೊಟ್ಟರು.. ಸರಿ ಅಂತ‌‌ ತಲೆ ಆಡಿಸಿದೆ.   ಕೆಲ ದಿನಗಳ ನಂತರ ನಮ್ಮ‌ ಮನೆಯ ಪಕ್ಕದ ಮನೆಗೆ ಪಾಪ ಎಂತದೊ ಕಮಿಟಿ ಅಂತೆ ಎಲ್ಲಾ ಬಂದಿದ್ದರು. ಆಶಾ, ಸಿಸ್ಟರ್ ,ಆಂಗನವಾಡಿ ಟೀಚರ್, ಪಿ.ಡಿ.ಒ. ವಿ.ಎ,. ಪೊಲೀಸ್, ಗ್ರಾಮ ಪಂಚಾಯತಿ ಮೆಂಬರ್ ಎಲ್ಲಾ ಬಂದಿದ್ದರು ನಾನು ಈ ಮೊದಲು ಸರ್ಕಾರಿ ಅಧಿಕಾರಿಗಳೆಂದರೆ ಬರೀ ಕಛೇರಿ ದುಡ್ಡು ಎಂದು ತಪ್ಪಾಗಿ ತಿಳಿದುಕೊಂಡಿದ್ದೆ ಆದರೆ ನಿಜಕ್ಕೂ ಇವರೆಲ್ಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಯೋಗಕ್ಷೇಮದ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಾಪ ಅವರಿಗೆಲ್ಲಾ ಆ ಮನೆಯವರು ನೀಡಿದ ಜವಾಬು ನೋಡಬೇಕಿತ್ತು, ನಮಗೇನೂ ಕೊರೊನಾ ಬಂದಿಲ್ಲ ಸರ್ ಟೆಸ್ಟ್ ಆಗಿದೆ , ಎಲ್ಲರೂ ಹೊರಗಡೆ ಸುತ್ತಾಡತ್ತಾ ಇರತ್ತಾರೆ ನಮಗೆ ಮಾತ್ರ ಹೇಳತ್ತಿರಾ ಇಲ್ಲಿ ಯಾರಿಗೂ ಕೊರೊನಾ ಬಂದಿಲ್ಲ ಪ್ಲೀಸ್ ಇಲ್ಲಿಂದ ಹೋಗಿ ಅಂತ ಮನೆಯವರೆಲ್ಲಾ ಒಕ್ಕೂರಿಲಿನಿಂದ ಕಿರುಚಿತ್ತಿದ್ದರು.ಅದರಲ್ಲಿ ಒಬ್ಬನಂತೂ we have commonsense pls go ಎಂದನು. ಈ ಮಾತು ಕೇಳಿ ಪಿ.ಡಿ.ಒ ಆಫೀಸರ್ ತುಂಬಾ ಸಿಟ್ಟಿನವರಿರಬೇಕು, ಆದರೂ ಸಮಾಧಾನ ತಂದುಕೊಂಡು , ನಾವೇಕೆ ಈ ಬಿಸಿನಲ್ಲಿ ನಿಮ್ಮ ಮನೆಗೆ ಬರಬೇಕು , ಅರ್ಥ ಆಗಲ್ವ ನಿಮಗೆ , ನಿಮ್ಮ ಕುಟುಂಬಕ್ಕಾಗಿ ನೀವು ಮನೆಯಲ್ಲಿಯೇ ಇರಿ ಅಂತ ಜೋರು ಮಾಡಿದರು. ಲಾಕ್ ಡೌನ್ ಅಂದರೆ ಮನೆಯಲ್ಲಿ ಇರೊದು ಕ್ವಾರಟೈನ್ ಅಂದರೆ ಮನೆಯಲ್ಲಿ ಪ್ರತ್ಯೇಕವಾಗಿರೋದು , ನಿಮಗೆ ಕೊರೊನಾ ಬಂದಿದೆ ಅಂತ ಹೇಳತ್ತಿಲ್ಲ ನೀವೆ ನಿಮ್ಮ ಮನೆಯವರಿಗೆ ವಿಲನ್ ಆಗಬೇಡಿ ನಿಮ್ಮ ಕುಟುಂಬ ಕ್ಕಾಗಿ ನಾವು ಬಂದಿದ್ದೀವಿ ಎಂದು ತಿಳಿಸಿ ಹೇಳಿದರು. ಅಂತೂ ಸಮಾಧಾನ ಆದರು. ಅಂತೂ ರಣಕೇಕೆ ಹಾಕುತ್ತಿರೊ ಈ ಕೊರೊನಾ ಗೆ ವ್ಯಾಕ್ಸಿನ್ ಬಂತು ಆದರೆ ಅದರ ಹಿಂದೆ ಹಲವಾರು ಊಹಾಪೋಹಗಳು ಉಂಟುಕೊಂಡವು ಇದರಿಂದ ಅನೇಕ ಜನ ವ್ಯಾಕ್ಸಿನ್ ಹಾಕೊಂಡ್ರೆ ಸಾಯತಾರಂತೆ ಹಾಸ್ಪಿಟಲ್ ನಲ್ಲಿ ದುಡ್ಡು ಮಾಡೊಕೊಳ್ಳಕ್ಕೆ ಸರ್ಕಾರದ ಯೊಜನೆ ಇದು ಎಂಬಂತೆಲ್ಲಾ ವದಂತಿಗಳು ಹರದಡತ್ತಾ  ಇದೆ ಹಾಗಾಗಿ ಜನ ವ್ಯಾಕ್ಸಿನ್ ಹಾಕೊಳ್ಳಕ್ಕೆ ಎದರಿ ಮನೆಯಲ್ಲಿ ಉಳಿದಿದ್ದಾರೆ ತಮಾಷೆ ಏನು ಅಂದರೆ ನಮ್ ಮನೆಯಲ್ಲಿ ನಮ್ಮ ಅಮ್ಮ  ಅಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊರೆ ಇವತ್ತು ಅವರು ವ್ಯಾಕ್ಸಿನ್ ಗೆ ಎದರಿ ಮನೆಯಲ್ಲಿ ಇದ್ದರು  ಆದರೆ ನಾನು ಅದು ಬರೀ ವದಂತಿ ಅಷ್ಟೇ ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗೊದಿಲ್ಲ ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ನಮ್ಮಲ್ಲಿ humunity power boost up ಆಗುತ್ತೆ  ಅಂತ ಹೇಳಿದೆ ಅದಕ್ಕೆ ಅಮ್ಮನ ಉತ್ತರ ಓ ಹಾಗಿದ್ದರೆ ಯಾಕೆ ಜ್ವರ ಬಂದು ಎಲ್ಲಾ ಸಾಯತ್ತಾ ಇದಾರೆ ? ಅಯ್ಯೋ ಅಮ್ಮ ಅದು ವ್ಯಾಕ್ಸಿನ್ನಿಂದ ಅಲ್ಲ ಅವರು ಮೊದಲೇ ಬೇರೆ ಆರೋಗ್ಯ ಸಮಸ್ಯೆ ಇರುತ್ತವೆ ಇನ್ನೂ ಇದನ್ನು ಹಾಕಿಸಿಕೊಂಡಾಗ ಜ್ವರ  ಬರುತ್ತೆ ಕೆಲವರಿಗೆ  ಅದು ನಿನು ನನಗೆ ಒಂದು ವರ್ಷ ಇದ್ದಾಗ ಇನ್ ಜಂಕ್ಷನ್ ಹಾಕಿಸಿದ್ಯಲ್ವಾ ನೆ‌ನಪಿದಿಯಾ ಅವಾಗ ನನಗೆ ಜ್ವರ ಬಂದಿತ್ತು ಅಲ್ವಾ ಅದೇ ತರ ಇದು ಕೂಡಾ ಅಂತ ತಿಳಿಸಿ ಹೇಳಿದೆ ಅವಾಗ ಕಿರುನಗೆಯಿಂದ ಹೌದಾ…. !ಎಂಬ ಪ್ರತಿಕ್ರಿಯೆ ಬಂತು ಅಂತು ನಮ್ ಮನೆಯಲ್ಲಿ ಕೊನೆಗೂ ವ್ಯಾಕ್ಸಿನ್ ಹಾಕಿಸಿದೆ‌ ಇದೇ ನನ್ನಗೆ ಸಮಾಧಾನ.
    ನಮಗಾಗಿ ಪೋಲೀಸ್ , ಡಾಕ್ಟರ್‌,  ಆಶಾ ಕಾರ್ಯಕರ್ತೆ ಯರು, ಪಿ.ಡಿ.ಒಗಳು ನರ್ಸಗಳು, ಇವೆರಲ್ಲಾ ನಮಗಾಗಿ ನಮ್ಮ ಕುಟುಂಬಕ್ಕಾಗಿ ಕೆಲಸ ಮಾಡತ್ತಾ ಇದ್ದಾರೆ. ನಾನು ತುಂಬಾ ಬದಲಾಗಿದ್ದೆ ,ನಮಗಾಗಿ ಇವರೆಲ್ಲರೂ ಇಷ್ಟೆಲ್ಲಾ ಶ್ರಮಪಡುತ್ತಿದ್ದಾರೆ. ಪ್ರತಿಯೊಬ್ಬರೂ ಹೀಗೆ ಅಧಿಕ ಪ್ರಸಂಗ ಮಾಡುತ್ತಿದ್ದರೆ ಯಾರಿಗೆ ಅಂತ ಉತ್ತರ ಕೊಡತ್ತಾರೆ , ಎಲ್ಲರೂ ಮಾತಾಡೊರೆ , ಮನಸ್ಸಿಗೆ ಬಂದಂತೆ ಪ್ರಶ್ನೆ ಕೇಳೋರೆ , ನಮ್ಮ ಬದುಕಲ್ವಾ , ನಾವು ತಿಳ್ಕೋಬೇಕಾಲ್ವ , ನಮಗೆ ನಾವೇ ಲಾಕ್ ಡೌನ್ ಆಗಬೇಕು , ನಮಗೆ ನಾವೇ ಕ್ವಾರೈಟೆನ್ ಆಗಬೇಕು  , ಇದ್ದಿದ್ದನ್ನು ತಿನ್ನುತ್ತಾ ಒಂದಿಷ್ಟು ದಿನ ಕಳೆಯಬೇಕು.  ಬದುಕಿದ್ದರೆ ತಾನೇ ಎಲ್ಲ, ಮುಂದೆ ಬರುವ ಸಂತೋಷಗಳನ್ನು ಅನುಭವಿಸಬಹುದು . ಕುಟುಂಬದಲ್ಲಿ ಒಬ್ಬರಿಗೆ ಏನಾದರೂ ಹಾನಿಯಾದರೆ ನೆನಸಿಕೊಳ್ಳಲು ಸಾಧ್ಯವೇ, ಹಾಗಾಗಿ ಎಲ್ಲರೂ ಮುಂಜಾಗ್ರತೆ ವಹಿಸಬೇಕಾಗಿದೆ. 

              “   ಮನೆಗೊಂದು ಮರ , ಮನುಷ್ಯನಿಗೊಂದು ಮಾಸ್ಕ್”….…. 🤗
.                                                       .* ಮುಕ್ತಾಯ.*
  
ಭಾಗ್ಯಲಕ್ಷ್ಮಿ .ಎಂ. 2nd b.ed                                    ಗೊಲ್ಡ್ ಪೀಲ್ಡ್ ಕಾಲೇಜ್ ಆಫ್ ಎಜುಕೇಷನ್ , 
ಬಂಗಾರಪೇಟೆ. ಕೋಲಾರ ಜಿಲ್ಲೆ.

ವಿಳಾಸ:
ಅಜಗೊಂಡನಹಳ್ಳಿ ಗ್ರಾಮ
ಹೊಸಕೋಟೆ ತಾಲ್ಲೂಕು
ಬೆಂಗಳೂರು ಗ್ರಾಮಾಂತರ. 



1 ಕಾಮೆಂಟ್‌:

  1. ಚನ್ನಾಗಿದೆ ಆರ್ಟಿಕಲ್ ಇದೆ ರೀತಿ ನಿಮ್ಮ ಸಾಹಿತ್ಯದ ಜೀವನ ಮುಂದುವರೆಯಲಿ ನಿಮ್ಮ ವಿಚಾರಧಾರೆ ಎಲ್ಲರ ಮನೆ ಮನಸನ್ನು ತಾಕಲಿ ಎಂದು ಬಯಸುವೆ ಪ್ರೇಮಕವಿ

    ಪ್ರತ್ಯುತ್ತರಅಳಿಸಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...