ಮಂಗಳವಾರ, ಜುಲೈ 27, 2021

ತ್ರಿಪದಿಗಳು - ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.

ತ್ರಿಪದಿ
   
ತೆರೆದೆವು ನಾವು ಬಾಗಿಲು
ಶತ್ರು ಒಳಗೆ ಬರಲು
ಕಾರಣ ಹೊಲಸು ಎಂಜಲು//

ಹಾಗೆ ನಕ್ಕು ನಂಜಲು
ಬಿಟ್ಟೇವು ಸ್ವಾಭಿಮಾನ ಸಾಯಲು
ಹೇಡಿ ವೈರಿ ಮೆರೆಯಲು//

ತ್ಯಾಗ ಬಲಿದಾನ ಸೊರಗಲು
ಕಾರಣ ಸ್ವಾರ್ಥ ಹೆಗಲ ಹೇರಲು
ಮರೆತೆವು ಗುಣ ಹಣ ಗಳಿಸಲು//

ಕಾಲ್ ಕಿತ್ತೆ ಧೈರ್ಯ  ಕುಂದಲು
ಕೈ ಹಿಡಿದೆ ಶೌರ್ಯ ತುಳಿಯಲು
ಮನ ಸೋತೆ ಕಾರ್ಯ ಉಳಿಸಲು//

ಕೆಂಪಾದವು ಧರೆ ಮುಗಿಲು
ರಕ್ತದ ವಾಸನೆ ಹರಡಲು
ವೈರಿಯು ಜಯ ಸಾಧಿಸಲು//

ನ್ಯಾಯ ನೀತಿ ಧರ್ಮ ಕಳೆಯಲು
ಎಲ್ಲರು ಕೈಕಟ್ಟಿ ಸುಮ್ಮನೆ ಕುಳಿತಿರಲು
ಮಾಡುವರಾರು ಯೋಚನೆ ಪೀಳಿಗೆ ಬಾಳಲು//
✍️ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ, ಸಾ!ಭೈರಾಪೂರ. ತಾ!ಜಿ!!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...