ಮಂಗಳವಾರ, ಜುಲೈ 27, 2021

ಆಪದ್ಬಾಂಧವ ಶಾಹು ಮಹಾರಾಜ (ಕವಿತೆ) - ಶ್ರೀಧರ ಗಸ್ತಿ ಧಾರವಾಡ.

ಆಪದ್ಬಾಂಧವ ಶಾಹು ಮಹಾರಾಜ

ಮತ್ತೊಮ್ಮೆ ಹುಟ್ಟಿ ಬಾ ಶಾಹುಮಹಾರಾಜಾ
ನಿಮ್ಮಿಂದ ಬೆಳಗಿಹುದು ಪ್ರಬುದ್ಧ ಭಾರತ
ಸಮತೆಯ ಸಂವಿಧಾನ ಮುನ್ನುಡಿ ಬರೆಯಲು
ಹಿನ್ನೋಟದಲಿ  ಮುನ್ನಡೆಸಿದಾ ದೊರೆಯೇ

ಬಡತನದ ಬವಣೆಯಲಿ ಕಲಿತದ್ದು ಬಹಳ
ಕಲಿಯಬೇಕಿತ್ತಿನ್ನು ಹೆಚ್ಚಿನ ವಿಷಯ
ಹೊರದೇಶಕ್ಕೆ ಕಳುಹಿಸಲು ಮುಂದಾಗಿ
ಭೀಮರಾಯರಿಗೆ ಪ್ರೋತ್ಸಾಹ ನೀಡಿದಾ ದೊರೆಯೇ

ನಿಮ್ಮಂತೆ ಪೋಷಿಸುವ ದೊರೆಗಳು ಮೊದಲಿಲ್ಲ
ಜಾತಿ ಜಾತಿಗೆ  ಗುಂಪು ಕದಡಿಹವು ಇಲ್ಲಿ
ಮೀಸಲಾತಿಯ ಕನಸು ನೀ ಹೊಸೆದಾ ಬೆಸುಗೆಯಲಿ
ಏರುತಿಹುದು ಗಾಳಿಪಟದಂತೆ ಇಲ್ಲಿsss

ವಿದ್ಯೆಗೆ ಮೊದಲ ಅಡಿ ಇಟ್ಟ ಮಹಾಗುರುವೆ
ಬಿತ್ತಿದಿರಿ ಅಕ್ಷರವ ದೀನ ದಲಿತರಿಗೆ
ಅರಿವು ಜಾಗೃತಿಗಾಗಿ ' ಮೂಕನಾಯಕ 'ನನ್ನು
ಲೋಕಕೆ ಪರಿಚಯ ಮಾಡಿದಿರಿ ನೀವು

ವಿಧವೆಯರ ಮರುಜನ್ಮ ನೀಡಿದ ದೊರೆಯೇ ದೇವದಾಸಿಗೆ ಕೊಟ್ಟೆ ದಾಸ್ಯದಾ ಮುಕ್ತಿ
ಶಗಣಿಗೊಬ್ಬರ ಬಳಿವ ವಂಶಾವಳಿ ಜೀತಕ್ಕೆ
ನಿಷೇಧ ಹಾಕಿದಾ ದೊರೆಯೇsssss

ಜಾತಿಹೀನನ ಮನೆಯು ಜ್ಯೋತಿ ತಾ ಹೀನವೇ
ಜಾತಿ ಕುಲವು ಅಲ್ಲ ನಿನ್ನ ವೃದ್ಧೀಸಲು
ಜಾತಿ ಜಾತಿಯ ಮಧ್ಯೆ ಕಂದಕವ ಮುಚ್ಚಿಸಿ
ಅಂತರ್ಜಾತಿಗೆ ಬಂಧ ಬೆಸೆದಂಥ ದೊರೆಯೇ

ಸತ್ಯ ಶೋಧಕ ಮಂತ್ರ ಪಠಿಸಿದಿರಿ ನೀವು
ಜನಕಲ್ಯಾಣಕೆ ಸೂತ್ರವ ಹೆಣೆದಿರಿ
ಕಾಡುಗಳ್ಳರ ಮೆಟ್ಟಿ ದಿಟ್ಟತನ ತೋರ್ಪಡಿಸಿ
ಭರತಮಾತೆಯ ಕೀರ್ತಿ ಆದೀರಿ ನೀವು

              -   ಶ್ರೀಧರ ಗಸ್ತಿ ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ‌)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...