ಹರೆಯದ ವಯಸ್ಸಿನಲ್ಲಿ.
ನೀ ಕಂಡೆ ನನ್ನ ಕಣ್ಣುಗಳಲ್ಲಿ.
ಮದುವೆಯೆಂಬ ಮಂಟಪದಲ್ಲಿ.
ಮಾಂಗಲ್ಯ ಎಂಬ ಸೂತ್ರದಲ್ಲಿ.//
ಜೊತೆಯಾಗಿ ಕೈಹಿಡಿದು ಸಪ್ತಪತಿ ಎಲ್ಲಿ.
ಸಾಗಿದೆ ಪಯಣದ ಓಟದಲ್ಲಿ.
ಮುಪ್ಪಿನ ಕಡೆಯವರಿಗೂ ನಿನ್ನ ಜೊತೆಯಲಿ.
ನಡೆದೆ ನಿನ್ನ ದಾರಿಯಲ್ಲಿ.//
ಬಾಳೆಲ್ಲ ಸವಿಜೇನು ನಿನ್ನ ಜೊತೆಯಲ್ಲಿ.
ಪ್ರತಿಕ್ಷಣ ನನ್ನ ಮನದ ಅರಮನೆಯಲ್ಲಿ.
ಬಿಸಿಯುಸಿರಿನ ಹೃದಯ ಮಂದಿರದಲ್ಲಿ.
ನಾ ಬಂದೆ ನಿನ್ನ ಬಾಳ ಪುಟದಲಿ.//
ಕನಸುಗಳ ಹೊತ್ತು ನೀ ತಂದೆ.
ಬಾಳೆಲ್ಲಾ ಮಲ್ಲಿಗೆ ಹರುಷದಲ್ಲಿ.
ನಮ್ಮಿಬ್ಬರ ಪ್ರೇಮದ ಸುಳಿಯಲ್ಲಿ.
ನಂಬಿಕೆಗಳ ಸತ್ಯಾಸತ್ಯತೆಗಳ ಹಾದಿಯಲ್ಲಿ.//
ನೀ ನಡೆಯುವ ದಾರಿಯಲಿ.
ನನ್ನ ಹೆಜ್ಜೆಗಳ ಸಮ್ಮಿಲನದಲ್ಲಿ.
ಬದುಕಿಲ್ಲ ಹೊಸ ಚೈತನ್ಯದ ಚಿಲುಮೆಯಲ್ಲಿ.
ನೀ ಬಂದೆ ನನ್ನ ಬಾಳ ಪುಟದಲಿ.//
- ಕೆ. ಬಿ.ಮಧು
ಕೊತ್ತತ್ತಿ ಗ್ರಾಮ.
ಮಂಡ್ಯ ತಾಲೂಕು ,ಜಿಲ್ಲೆ.
"ಭಾವುಕ ಮನ".
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ