ಶುಕ್ರವಾರ, ಅಕ್ಟೋಬರ್ 22, 2021

ನಾನೊಬ್ಬ ಸಿಪಾಯಿ(ಕವಿತೆ) - ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನು ಆಗಿಬಿಡುವೆನು ವೀರ ಯೋಧನಂತೆ..
ನನ್ನ ಅರ್ಧಂಗಿ ಆವಳಾಗಿ ಆವರಿಸಿರಲು
ಮನದಲಿ ಅವಳಾಗುವಳು ಧೈರ್ಯ ಲಕ್ಷ್ಮಿಯಂತೆ.//೧//

ಅವಳಿಲ್ಲದೆ ನಾನಿಲ್ಲ ಗೃಹದೊಳಗೆ 
ಅವಳಿಲ್ಲದ ದಿನ ಚಂದಿರ ಮರೆಯಾದಂತೆ.. 
ಅವಳು ಬಳಿಯಿದ್ದರೆ ದಿನವು  ಹರುಷವೇ
ದೂರಾದರೆ ಅಮಾವಾಸ್ಯ ಕತ್ತಲು ಗವಿದಂತೆ.//೨//

ಅರಗಿಣಿಯ ನುಡಿಯು  ಚಂದನವು 
ಗೃಹದೊಳಗೆ ನಡೆದರೆ ನವಿಲು ನರ್ತವು.. 
ತೊಟ್ಟ ಕಂಕಣ ಕಾಲುಗೆಜ್ಜೆ  ನಾದವು
ಮೊಳಗುವುದು ವಾದ್ಯ ವೇದಘೋಷವು.//೩//

ಅವಳ ಧೀರತನ ಶಾಂತ ನುಡಿಯಿಂದ
ಕಷ್ಟ ನೋವ ಮರೆಸಿ ಕಂದನಾಗುವೇನು..
ಹೆಣ್ಣೊಂದು ಸಾಂತ್ವನ ಶಾಂತಸ್ವರೂಪಿ ಸಾಧ್ವಿಯು 
ಅವಳಿದ್ದರೆ ನಾನೊಬ್ಬ ಸಿಪಾಯಿಯಾಗಿ ಮೇರೆಯುವೇನು..//೪//
- ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...