ಮಂಗಳವಾರ, ನವೆಂಬರ್ 23, 2021

ನಾ ಕೇಳದ ಹುಟ್ಟಿಗೇಕೆ ಶಿಕ್ಷೆ?? (ಕವಿತೆ) - ಡಿ.ಶಬ್ರಿನಾ ಮಹಮದ್ ಅಲಿ.

ನಾ ಕಣ್ಣುಬಿಡುವ ಮೊದಲೇ
ಹೆತ್ತವರಿಂದ ತಿರಸ್ಕಾರವಂತೆ!
ನಡೆದಾಡುವ ಮೊದಲೇ
ನಾ ಹೊರೆಯಾದೆನಂತೆ!
ಮಾತನಾಡುವ ಮೊದಲೇ
ನಾ ಅಪ್ರಯೋಜಕಿಯಂತೆ!
ಅಕ್ಷರ ಕಲಿಯುವ ಮೊದಲೇ
ನಾ ಅಬಲೆಯಂತೆ!
ನಾ ಕೇಳದ ಹುಟ್ಟಿಗೆ 
ನಮಗೇಕೆ ಇಂಥಾ ಶಿಕ್ಷೆ.?

ಚಾಕರಿಗಾಗಿ ಹೆಣ್ಣಂತೆ
ನೌಕರಿಗಾಗಿ ಗಂಡಂತೆ!
ಕಥೆ ಪುರಾಣಗಳಲಿ 
ಹೆಣ್ಣು ಆದಿಶಕ್ತಿಯಂತೆ!
ನೆಲ ಉತ್ತಿಬಿತ್ತಿದರೂ
ಸಂಸಾರದ ನೊಗ ಹೊತ್ತರೂ
ಭೂಮಿ ಮೇಲಿನ ನಾವು
ಕೇವಲ ಗೃಹಿಣಿಯಂತೆ!
ನಾ ಕೇಳದ ಹುಟ್ಟಿಗೆ 
ನಮಗೇಕೆ ಇಂಥಾ ಶಿಕ್ಷೆ?

ನಮ್ಮ ಹುಟ್ಟನ್ನೆ
ಹಿಯ್ಯಾಳಿಸಿದವರಿಗೆ
ಕಾಮ ನೀಗಿಸಲು
ನಮ್ಮ ದೇಹ ಬೇಕಂತೆ!
ಹಸುಗೂಸದಾರೆನಂತೆ!
ಬಾಲಕಿಯಾದರೆನಂತೆ!
ಹುಚ್ಚಿಯಾದರನೆಂತೆ!
ಒಟ್ಟಿನಲಿ ಹೆಣ್ಣಾದರಾಯಿತಂತೆ!
ನಾ ಕೇಳದ ಹುಟ್ಟಿಗೆ 
ನಮಗೇಕೆ ಇಂಥಾ ಶಿಕ್ಷೆ?

ನಮ್ಮ ನೋವಿನ ಕಂಬನಿ
ಸೀರೆಯ ಸೆರಗು ಬಲ್ಲದು!
ಅಡುಗೆಮನೆಯ ಒಲೆ ಬಲ್ಲದು!
ಬಚ್ಚಲುಮನೆಯ ಗೋಡೆ ಬಲ್ಲದು!
ಮಲಗುವ ದಿಂಬುಗಳು ಬಲ್ಲವು!
ಪಕ್ಕದಲ್ಲಿರುವ ನೀವು ಬಲ್ಲದಾದಿರಿ!
ಇದನ್ನು ನೀವು ನಿಮ್ಮ 
ಗೆಲವು ಎಂದು ಬೀಗುವಿರಿ...!
ನಾ ಕೇಳದ ಹುಟ್ಟಿಗೆ
ನಮಗೇಕೆ ಇಂಥಾ ಶಿಕ್ಷೆ..?
 - ಡಿ.ಶಬ್ರಿನಾ ಮಹಮದ್ ಅಲಿ, ಶಿಕ್ಷಕಿ, ಚಳ್ಳಕೆರೆ, ಚಿತ್ರದುರ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...