ಭಾನುವಾರ, ನವೆಂಬರ್ 14, 2021

ಪ್ರೀತಿಯ ದೀಪಾವಳಿ (ಕವಿತೆ) - - ಆಶಾ.ಎಲ್.ಎಸ್, ಶಿವಮೊಗ್ಗ.

ಮತ್ತೆ ಬಂದಿತು ದೀಪಾವಳಿ
ಎಲ್ಲೆಲ್ಲೂ ಸಡಗರದ ಹಾವಳಿ
ಹಚ್ಚೋಣ ಪ್ರೀತಿಯ ಪ್ರಣತಿ
ಬೆಳಗಲಿ ಎಲ್ಲರೆದೆಯಲ್ಲಿ ಜ್ಯೋತಿ

ಕರಗಲಿ ಮನದ ದ್ವೇಷ ಅಸೂಯೆ
ಹರಡಲಿ ಎಲ್ಲೆಲ್ಲೂ ಪ್ರೀತಿಯ ಛಾಯೆ
ಲೆಕ್ಕವಿಲ್ಲದಷ್ಟು ದೀಪಗಳ ಉತ್ಸವ
ಹೃದಯದಲಿ ಬೆಳಗಲಿ ಸ್ನೇಹಭಾವ

ಸಿಡಿಯದಿರಲಿ ಮಾತಿನ ಕಿಡಿ
ಹೊಮ್ಮಿಬರಲಿ ಹೊಂದಿಕೆಯ ನುಡಿ
ಮತ್ತೆ ಮತ್ತೆ ಹಚ್ಚೋಣ ಪ್ರೀತಿಯ ದೀಪ
ಎಲ್ಲರ ಹೃದಯದಲಿ ಬೆಳಗಲಿ ಪ್ರೀತಿಯ ದೀಪ

- ಆಶಾ.ಎಲ್.ಎಸ್, ಶಿವಮೊಗ್ಗ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...