ಭಾರತದ ಅಣ್ಣ
ಸಂದೀಪ್ ಉನ್ನಿಕೃಷ್ಣ
ತಂದೆ-ತಾಯಿ ಪಟ್ಟರು ಆನಂದ,
ಸೇನೆಗೆ ಸೇರಿದ ನಮ್ಮ ಕಂದ....!
ದೇಶ ರಕ್ಷಣೆ ಮಾಡುವೆ ಎಂದು ಎಂದ,
ತೊಟ್ಟ ಪಣ ಬಿಡಲಿಲ್ಲ ಈ ಕಂದ.
ಹೋದನು ಸೇನೆಗೆ ಖುಷಿಯಿಂದ,
ವೈರಿಗಳ ಜೀವ ತೆಗೆದನು ಧೈರ್ಯದಿಂದ....!
ಶೌರ್ಯದಿಂದ ನಿಲ್ಲಿಸಿದ ಉಗ್ರರ ಅಟ್ಟಹಾಸ,
ತಾಯಿನಾಡು ರಕ್ಷಣೆಗೆ ಮಾಡಿದ ಹರಸಾಹಸ.
ಭಾರತಾಂಬೆಯ ವೀರಪುತ್ರ ಈತ,
ಇನ್ನೊಂದು ಹೇಳುವೆ ಪ್ರೀತಿಯ ಮಾತ...!
ಉಸಿರುಬಿಟ್ಟು ಹಾರಿಸಿದ ಬಾವುಟ,
ಬಾನೆತ್ತರದಲ್ಲಿ ಹಾರುತಿದೆ ಪಟಪಟ.
ಕೇಸರಿ, ಬಿಳಿ, ಹಸಿರು
ಸೈನಿಕರಿಗೆ ಆಯಿತು ಉಸಿರು....!
ಸೈನಿಕ ನೀ ಈ ದೇಶದ ನಾಯಕ
ಮೆಚ್ಚಲೇಬೇಕು ಈ ನಿನ್ನ ಕಾಯಕ.
ಹೇಳುವೆ ಕಣ್ಣೀರಿನ ಕಥೆಯೊಂದ,
ಸಂದೀಪ ಇಲ್ಲದಂತಾಯ್ತು ಇನ್ನ ಮುಂದ....!
ಮಡಿದನು ಭಾರತಾಂಬೆಯ ಮಡಿಲಲ್ಲಿ
ರಕ್ತ ಕುದಿಯುತ್ತಿತ್ತು ಒಡಲಲ್ಲಿ.
ಮತ್ತೊಮ್ಮೆ ಹುಟ್ಟಿ ಬನ್ನಿ ತಾಯ್ನಾಡಿನಲ್ಲಿ,
ಜಯದ ಬಾವುಟ ಹಾರಿಸೋಣ ಭಾರತದ ನೆಲದಲ್ಲಿ...!
- ಅಂಬರೀಶ D. ನಾಯ್ಕೋಡಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ