ಭಾನುವಾರ, ನವೆಂಬರ್ 14, 2021

ಗಜಲ್ - ಸುಪ್ರೀತಾ ಶೆಟ್ಟಿ (ಗುಬ್ಬಚ್ಚಿ) ಮುಳ್ಳುಗುಡ್ಡೆ, ಕುಂದಾಪುರ.

ಕನಸುಗಳ ಕೂಡಿಟ್ಟ ಪುಟ್ಟ ಅರಮನೆ ಚೂರಾಗಿ ಹೋಗಿದೆ,
ಜೊತೆ ಸೇರಿ ಬೆಳೆಸಿದ ಗಿಡವೀಗ ಕೊಡಲಿಗೆ ಬಲಿಯಾಗಿ ಹೋಗಿದೆ/

ನಾವು ನಡೆದ ಹಾದಿಯಲಿ,
ಮುಳ್ಳು ಪೊದೆಗಳು ತುಂಬಿವೆ/

ನಂಬಿ ಕೈ ಮುಗಿದ ಹುತ್ತವೂ ಮರೆಯಾಗಿ ಹೋಗಿದೆ,
ಅಡುಗೆ ಮನೆಯಲಿ ನಿನ್ನ ಕೈ ಬಳೆಯ ಸದ್ದಿಲ್ಲ/

ಪ್ರೀತಿಯ ಮಾತೆಲ್ಲ ಜೇಡರ ಬಲೆಯಲಿ ಬಂಧಿಯಾಗಿ ಹೋಗಿದೆ/

ನಾವಿಬ್ಬರು ನೆಟ್ಟಿದ್ದ ಬಳ್ಳಿಯ ತುಂಬಾ ಮಲ್ಲಿಗೆ ಅರಳಿದೆ,
ನಿನ್ನ  ಗೋರಿಯ ಮೇಲೆ ಬಿದ್ದ ಹೂವು ಒಣಗಿ ಹೋಗಿದೆ/

ನಾ ಕೂಡಿಟ್ಟ ಹಣದಿ ನಿನಗಾಗಿ ತಂದ ಉರುಗೋಲು ಮುರಿದಿದೆ/

ನಮ್ಮ ಮಕ್ಕಳು ಮರೆತು ಹೋದ ಹಳೆಯ ಫೋಟೋ ಅನಾಥವಾಗಿ ಹೋಗಿದೆ/

ನೀನೋ ಪುಣ್ಯವತಿ 'ಗುಬ್ಬಚ್ಚಿ'ಯಂತೆ ನನ್ನೆದೆಯ ಮೇಲೆ ಚಿರನಿದ್ರೆಗೆ ಜಾರಿದೆ/

ನಾ ನಿನ್ನ ನೆನಪುಗಳ ಮೂಟೆಯೊಂದಿಗೆ ಆಶ್ರಮ ಸೇರಿ ವರುಷಗಳಾಗಿ ಹೋಗಿದೆ/
- ಸುಪ್ರೀತಾ ಶೆಟ್ಟಿ (ಗುಬ್ಬಚ್ಚಿ) ಮುಳ್ಳುಗುಡ್ಡೆ ,ಕುಂದಾಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...