ಭಾನುವಾರ, ನವೆಂಬರ್ 14, 2021

ಕನ್ನಡ ನಾಡು, ನುಡಿ ಸಂಸ್ಕೃತಿ, ಕಾವ್ಯ ಪರಂಪರೆ (ಲೇಖನ) - ಶ್ರೀಮತಿ ಸೂಗಮ್ಮ ಡಿ ಪಾಟೀಲ್ ಉತ್ನಾಳ್ (ವಿಜಯಪುರ ಜಿಲ್ಲೆ).

ಕನ್ನಡನಾಡು ೧೯೫೬ ಕ್ಕೂ ಮೊದಲು ಹೈದ್ರಾಬಾದು, ಮದ್ರಾಸು ಹಾಗೂ ಮುಂಬೈ ಮುಂತಾದ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ತೀವ್ರ ಚಳವಳಿಯ ಫಲವಾಗಿ ಭಾರತ ಸರ್ಕಾರವು ೧೯೫೪ ರಲ್ಲಿ ಫಜಲ್ ಅಲಿ ಸಮಿತಿಯನ್ನು ರಚಿಸಿತು.
ಈ ಸಮಿತಿಯು ಕನ್ನಡ ಮಾತಾಡುವ ಭೂಭಾಗಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯವನ್ನು ರಚಿಸಲು ಸಲಹೆ ನೀಡಿತು. ಹಾಗಾಗಿ ಭಾಷಾ ಆಧಾರದ ಮೇಲೆ ರಾಜ್ಯಗಳ ಪುನರ ರಚನೆಯಾಗಲಾಗಿ ನವೆಂಬರ್  ೧,  ೧೯೫೬ ರಂದು ಏಕೀಕೃತ ಮೈಸೂರು ರಾಜ್ಯದ ಉದಯವಾಯಿತು. ಕನ್ನಡಿಗರ ಒತ್ತಾಯದ ಮೇರೆಗೆ ನವೆಂಬರ್ ೧ ೧೯೭೩ ರಂದು ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಮರು ನಾಮಕರಣ ಮಾಡಲಾಯಿತು.

ಪರಂಪರೆಯ ತಾಣ:

ಕರ್ನಾಟಕವು ಭವ್ಯ ಪರಂಪರೆಯನ್ನು ಹೊಂದಿದೆ. ಅದು ಅಪಾರ ಭೌಗೋಳಿಕ ಸಂಪತ್ತನ್ನು ಹೊಂದಿದ್ದು, ಕಲೆ, ಸಾಹಿತ್ಯ, ಲಲಿತ ಕಲೆ, ಹಾಗೂ ಕ್ರೀಡೆಗಳಲ್ಲಿ ತನ್ನದೇ ಆದ ಛಾಪನ್ನು ಮೂಢಿಸಿದೆ. ಈ ನಾಡನ್ನು ಮೌರ್ಯರು, ಹೊಯ್ಸಳರು, ಗಂಗರು, ಚಾಲುಕ್ಯರು ವಿಜಯನಗರ ಅರಸರು ಹಾಗೂ ಮೈಸೂರಿನ ಒಡೆಯರು ಮುಂತಾದ ಪ್ರಮುಖ ರಾಜರು ಆಳಿದ್ದು ಅನೇಕ ಸಾಮ್ರಾಜ್ಯಗಳ ತವರು ಮನೆಯಾಗಿದೆ. ಇಲ್ಲಿ ಮಯೂರ ವರ್ಮ, ನೃಪತುಂಗ, ಕೃಷ್ಣದೇವರಾಯ ಮುಂತಾದ ವೀರರು ಆಳಿ ಹೋಗಿದ್ದಾರೆ. ಬಸವಣ್ಣ, ಪುರಂದರದಾಸ,ಕನಕದಾಸ, ಇಂತಹ ಮಹನೀಯರು ಜನಿಸಿದ ಪುಣ್ಯಭೂಮಿ ನಮ್ಮದು. 

ಆಂಗ್ಲ ವ್ಯಾಮೋಹ:

ಇಂತಹ ನಾಡಿನಲ್ಲಿಂದು ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಾಗುತ್ತಿದೆ ಕನ್ನಡ ಮಣ್ಣಲ್ಲಿ ಹುಟ್ಟಿ ಕಾವೇರಿ ನೀರು ಕುಡಿದು ಅನ್ಯ ಭಾಷೆ, ಅನ್ಯ ರಾಜ್ಯವನ್ನು ಶ್ರೀಮಂತಗೊಳಿಸುವದೇಕೆ?
ದಯಮಾಡಿ ಈಗಲೇ ಎಚ್ಚೆತ್ತುಕೊಳ್ಳಿ ಪ್ರಗತಿ ನಮ್ಮ ನುಡಿ ನೆಲದ್ದಾಗಲಿ ಅದರ ಏಳಿಗೆಗೆ ನಮ್ಮ ನಿಮ್ಮೆಲ್ಲರ ಶ್ರಮವಿರಲಿ.
ಈ ನಾಡಿಗಾಗಿ ಎಂದಿಗೂ, ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ,
ಬಾಯ್ ಒಲಿಸಾಕಿದ್ರೂನೆ –
ಮೂಗ್ನಲ್ ಕನ್ನಡ್ ಪದವಾಡ್ತೀನಿ !
ನನ್ನ ಮನಸನ್ನ್ ನೀ ಕಾಣೆ !
ಅನ್ನೋದು ತಾಯಿನುಡಿಯ ಶ್ರೇಷ್ಠತೆಯನ್ನು ಸಾರುತ್ತದೆ. ಕವಿ ಜಿ.ಪಿ.ರಾಜರತ್ನಂ  ಅವರ ಆಶಯದಂತೆ ನಾವು ನೀವೆಲ್ಲಾ ಬಾಳೋಣ.
- ಶ್ರೀಮತಿ ಸೂಗಮ್ಮ ಡಿ ಪಾಟೀಲ್
ಉತ್ನಾಳ್ (ವಿಜಯಪುರ ಜಿಲ್ಲೆ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...