ಸೂರ್ಯೋದಯಕ್ಕೆ ಮುನ್ನ ನಡೆಯುವನು ಗದ್ದೆಯತ್ತ
ಮಳೆಯೆನ್ನದೆ ಬಿಸಿಲೆನ್ನದೆ ನಿರಂತರ ದುಡಿಯುತ್ತ
ಪ್ರಕೃತಿಯನ್ನು ಅರಿತವನಾತ
ಮಣ್ಣಲ್ಲಿ ಮಣ್ಣಾಗಿ ಹೊನ್ನನ್ನು ಬೆಳೆಯುವನಾತ
ದವಸ ಧಾನ್ಯ ಬೆಳೆದು ಅನ್ಯರಿಗೆ ಅನ್ನದಾತ
ಭೂತಾಯಿಯ ಸೇವೆಗೆ ಜೀವನ ಮುಡಿಪಾಗಿಡುವನಾತ
ತುತ್ತು ಅನ್ನಕ್ಕಾಗಿ ಬೆವರು ಹರಿಸಿ ದುಡಿಯುವನಾತ
ಹಸಿರಿಗೆ ಉಸಿರು ಕೊಡುವ ಪುಣ್ಯದಾತ
ಜಗದ ಹಸಿವನ್ನು ನೀಗಿಸುವ ಧಾನ್ಯದಾತ
ನಿತ್ಯ ನಿರಂತರ ದುಡಿಯುವ ದಣಿವಿಲ್ಲದ ದನಿ ಆತ.
✍️ ಸವಿತಾ ಆರ್ ಅಂಗಡಿ. ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Super
ಪ್ರತ್ಯುತ್ತರಅಳಿಸಿ