ಭಾನುವಾರ, ನವೆಂಬರ್ 14, 2021

ದಣಿವಿಲ್ಲದೆ ಧಣಿ (ಕಿರು ಕವನ) - ಸವಿತಾ ಆರ್ ಅಂಗಡಿ. ಮುಧೋಳ.

ಸೂರ್ಯೋದಯಕ್ಕೆ ಮುನ್ನ ನಡೆಯುವನು ಗದ್ದೆಯತ್ತ
 ಮಳೆಯೆನ್ನದೆ ಬಿಸಿಲೆನ್ನದೆ ನಿರಂತರ ದುಡಿಯುತ್ತ
 ಪ್ರಕೃತಿಯನ್ನು ಅರಿತವನಾತ
 ಮಣ್ಣಲ್ಲಿ ಮಣ್ಣಾಗಿ ಹೊನ್ನನ್ನು ಬೆಳೆಯುವನಾತ
 ದವಸ ಧಾನ್ಯ ಬೆಳೆದು  ಅನ್ಯರಿಗೆ ಅನ್ನದಾತ
 ಭೂತಾಯಿಯ ಸೇವೆಗೆ ಜೀವನ ಮುಡಿಪಾಗಿಡುವನಾತ
 ತುತ್ತು ಅನ್ನಕ್ಕಾಗಿ ಬೆವರು ಹರಿಸಿ ದುಡಿಯುವನಾತ
 ಹಸಿರಿಗೆ ಉಸಿರು ಕೊಡುವ ಪುಣ್ಯದಾತ
 ಜಗದ ಹಸಿವನ್ನು ನೀಗಿಸುವ ಧಾನ್ಯದಾತ
 ನಿತ್ಯ ನಿರಂತರ ದುಡಿಯುವ ದಣಿವಿಲ್ಲದ ದನಿ ಆತ.
✍️ ಸವಿತಾ ಆರ್ ಅಂಗಡಿ. ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...