ಸೋಮವಾರ, ನವೆಂಬರ್ 22, 2021

ಮಹಿಷ ಅರಸು(ಕವಿತೆ) - ತುಂಬಲ ಸುರೇಶ್.

ಮಹಿಷ ರಾಕ್ಷಸನೆಂದು
ಭಿತ್ತಿದರು ವಿಷ ಬೀಜವಾ
ಮನುವಾದಿಗಳು ಮೌಢ್ಯದ ಮನೆಯಲ್ಲಿ?
ದ್ರಾವಿಡರು ಬೌದ್ಧರು ಮರೆಯುವುದಿಲ್ಲ
ಮಹಿಸೂರಿನ ಜನಕನನ್ನು !

ಹೂವಿನಂತಹ ಮನಸ್ಸಿನ ಮಹಿಷನಿಗೆ
ಹಾವನ್ನು ಕೊಟ್ಟು ಹಿಡಿಸಿದರು
ಹಲ್ಲುಗಳ ಕೊರೆಯಮಾಡಿ
ಕ್ರೂರ ರೂಪವನ್ನು ತೊಡಿಸಿದರು

ಪೌರಾಣಿಕ - ಪುರಾಣಗಳನ್ನು ಕಟ್ಟಿಕೊಂಡು
ನವರಾತ್ರಿಯನ್ನು ಸೃಷ್ಟಿಸಿದರು
ಕಾಣದ ದೇವರ ದುರ್ಗಿಯ ಮಾಡಿ
ಮಹಿಷನಿಗೆ ಅಸುರ ಪಟ್ಟವನ್ನು ಕಟ್ಟಿದರು 

ಸಮಾನತೆಯನ್ನು ಸಾರಿದವನನ್ನು
ಸನಾತನವಾದಿಗಳು
ದೂರಿದರು
ಶಾಂತಿಯ ಸಾರಲು ಬಂದವನನ್ನು
ಸಾವಿನ ಮನೆಗೆ ನೂಕಿದರು
- ತುಂಬಲ ಸುರೇಶ್, 9620166872.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...