ಮಹಿಷ ರಾಕ್ಷಸನೆಂದು
ಭಿತ್ತಿದರು ವಿಷ ಬೀಜವಾ
ಮನುವಾದಿಗಳು ಮೌಢ್ಯದ ಮನೆಯಲ್ಲಿ?
ದ್ರಾವಿಡರು ಬೌದ್ಧರು ಮರೆಯುವುದಿಲ್ಲ
ಮಹಿಸೂರಿನ ಜನಕನನ್ನು !
ಹೂವಿನಂತಹ ಮನಸ್ಸಿನ ಮಹಿಷನಿಗೆ
ಹಾವನ್ನು ಕೊಟ್ಟು ಹಿಡಿಸಿದರು
ಹಲ್ಲುಗಳ ಕೊರೆಯಮಾಡಿ
ಕ್ರೂರ ರೂಪವನ್ನು ತೊಡಿಸಿದರು
ಪೌರಾಣಿಕ - ಪುರಾಣಗಳನ್ನು ಕಟ್ಟಿಕೊಂಡು
ನವರಾತ್ರಿಯನ್ನು ಸೃಷ್ಟಿಸಿದರು
ಕಾಣದ ದೇವರ ದುರ್ಗಿಯ ಮಾಡಿ
ಮಹಿಷನಿಗೆ ಅಸುರ ಪಟ್ಟವನ್ನು ಕಟ್ಟಿದರು
ಸಮಾನತೆಯನ್ನು ಸಾರಿದವನನ್ನು
ಸನಾತನವಾದಿಗಳು
ದೂರಿದರು
ಶಾಂತಿಯ ಸಾರಲು ಬಂದವನನ್ನು
ಸಾವಿನ ಮನೆಗೆ ನೂಕಿದರು
- ತುಂಬಲ ಸುರೇಶ್, 9620166872.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ